Advertisement

ಹಟ್ಟಿಯಂಗಡಿ ವಸತಿ ಶಾಲೆ: ರಂಗೋಲಿಯಲ್ಲಿ ಮೂಡಿದ ಗಾಂಧಿ

06:29 PM Oct 02, 2021 | Team Udayavani |

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನಾಚರಣೆಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು.

Advertisement

ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜತೆಗೂಡಿ ಗಾಂಧೀಜಿಯವರ 72*45 ಅಡಿ ವಿಸ್ತೀರ್ಣವುಳ್ಳ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದರು. ಕೊರೊನಾ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ 4 ಮಂಗಗಳ ಚಿತ್ರ ಬಿಡಿಸಿ ವ್ಯಾಕ್ಸಿನೇಷನ್‌, ಮಾಸ್ಕ್, ಸ್ಯಾನಿಟೈಸರ್‌ ಮತ್ತು ಸಾಮಾಜಿಕ ಅಂತರದ ಅಗತ್ಯತೆಯ ಸಂದೇಶ ಸಾರಲಾಯಿತು.

ಗಾಂಧೀಜಿಯವರ ಸರ್ವಧರ್ಮ ಸಮನ್ವಯತೆಯ ತತ್ವದಡಿ ಬಣ್ಣಬಣ್ಣದ ಹೂವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಈ ರಂಗೋಲಿಯನ್ನು ಸಿಂಗರಿಸಲಾಯಿತು. ಹೂಗಳ ಸಂಗ್ರಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತಮ್ಮ ಮನೆಯ ಪರಿಸರದಲ್ಲಿ ಬೆಳೆಯುವ ಬಗೆ – ಬಗೆಯ ಹೂವುಗಳನ್ನು ತಂದಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ:40 ದಿನಗಳಲ್ಲೇ ಎರಡು ಪದವಿ ಸೆಮಿಸ್ಟರ್‌ ಪರೀಕ್ಷೆ!

ಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಬೇಬಿ ಎಸ್‌. ನಾಯಕ್‌ ಮತ್ತು ರಮೇಶ್‌ ಆರ್‌. ಅವರ ಪರಿಶ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಶರಣ ಕುಮಾರ ಶ್ಲಾಘಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next