Advertisement

ಕೃಷ್ಣಾಪುರ ಮಠ ಪರ್ಯಾಯ ದರ್ಬಾರ್‌ ಬೆಳಗ್ಗೆ

12:29 AM Sep 28, 2021 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜ. 18ರಂದು ನಡೆಯುವ ಕೃಷ್ಣಾಪುರ ಮಠದ ಪರ್ಯಾಯದಲ್ಲಿ ಪರ್ಯಾಯ ದರ್ಬಾರ್‌ ಸಭೆಯನ್ನು ಬೆಳಗ್ಗೆಯೇ ನಡೆಸಲು ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.

Advertisement

ಪರ್ಯಾಯೋತ್ಸವದ ಮೆರವಣಿಗೆ ಬಂದ ಬಳಿಕ ದರ್ಬಾರ್‌ ಸಭೆ ನಡೆಸಿ ಬಳಿಕ ಮಹಾ ಪೂಜೆಗೆ ತೆರಳುವುದರಿಂದ ಸ್ವಾಮೀಜಿ ಯವರು ಆದಷ್ಟು ಶೀಘ್ರದಲ್ಲಿ ದರ್ಬಾರ್‌ ಸಭೆ ನಡೆಸಲಿದ್ದಾರೆ.

ಸಂಜೆ ಸಾಂಸ್ಕೃತಿಕ ಸಭೆ, ನಿರಂತರ ಜ್ಞಾನಯಜ್ಞದ ಉದ್ಘಾಟನೆ ನಡೆಯಲಿದೆ.

ಕಳೆದ 2020ರ ಅದಮಾರು ಮಠ ಪರ್ಯಾಯ ದರ್ಬಾರ್‌ ಸಭೆಯನ್ನು ಅಪರಾಹ್ನ ನಡೆಸಲಾಗಿತ್ತು. ಬೆಳಗ್ಗೆ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳು ಮಾತ್ರ ನಡೆದಿದ್ದವು.

ಬೆಳಗ್ಗೆ ಕಾರ್ಯಕ್ರಮ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಸಂಜೆ ಸಭೆ ನಡೆಸಲಾಗಿತ್ತು.

Advertisement

ಇದನ್ನೂ ಓದಿ:ದೇವಾಲಯ ತೆರವು: ನಂಜನಗೂಡು ತಹಶೀಲ್ದಾರ್ ಮೊಹನ ಕುಮಾರಿಗೆ ತಲೆ ದಂಡ

Advertisement

Udayavani is now on Telegram. Click here to join our channel and stay updated with the latest news.

Next