Advertisement

ಭುಜಕ್ಕೆ ಗಂಭೀರ ಏಟು : ಶ್ರೇಯಸ್‌ ಅಯ್ಯರ್‌ಗೆ ಶಸ್ತ್ರಚಿಕಿತ್ಸೆ

10:54 PM Mar 29, 2021 | Team Udayavani |

ಮುಂಬಯಿ: ಶ್ರೇಯಸ್‌ ಅಯ್ಯರ್‌ ಎ. 8ರಂದು ಎಡ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಅವರು ಬರೋಬ್ಬರಿ 5 ತಿಂಗಳ ಕಾಲ ವಿಶ್ರಾಂತಿಯಲ್ಲಿರಬೇಕಾಗುತ್ತದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

Advertisement

ಭುಜಕ್ಕೆ ಗಂಭೀರ ಏಟು
ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುತ್ತಿದ್ದ ವೇಳೆ ಅಯ್ಯರ್‌ ಭುಜಕ್ಕೆ ಗಂಭೀರ ಏಟು ಬಿದ್ದಿತ್ತು. ಕೂಡಲೇ ಅಂಗಳದಿಂದ ಹೊರನಡೆದ ಅವರು ಮತ್ತೆ ಸರಣಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಐಪಿಎಲ್‌ನಲ್ಲಿ ಡೆಲ್ಲಿ ತಂಡದ ನಾಯಕನೂ ಆಗಿದ್ದ ಅಯ್ಯರ್‌ ಈಗ ಈ ಕ್ಯಾಶ್‌ ರಿಚ್‌ ಪಂದ್ಯಾವಳಿಯಿಂದಲೂ ಹೊರಗುಳಿಯಲಿದ್ದಾರೆ.

ಚೇತರಿಕೆಗೆ 4-5 ತಿಂಗಳು
“ಅಯ್ಯರ್‌ ಚೇತರಿಕೆಗೆ 4-5 ತಿಂಗಳು ಬೇಕಾಗುತ್ತದೆ. ಹೀಗಾಗಿ ಅವರು ಐಪಿಎಲ್‌ ಮುಗಿದ ಬಳಿಕವೂ ಯಾವುದೇ ಸರಣಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ. ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ ವಿರುದ್ಧ ಸೆಪ್ಟಂಬರ್‌ನಲ್ಲಿ ನಡೆಯುವ ತವರಿನ ಟಿ20 ಸರಣಿ ವೇಳೆ ತಂಡಕ್ಕೆ ಮರಳಬಹುದು’ ಎಂದು ವರದಿಯಾಗಿದೆ.

ಇದನ್ನೂ ಓದಿ :ಸಿಡಿ ಪ್ರಕರಣದ ತನಿಖೆ ಕಾನೂನು ಪ್ರಕಾರ ನಡೆಯುತ್ತದೆ: ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next