Advertisement

ಶ್ರಾವಣಕ್ಕೆ ಹಳ್ಳಿ ಸೊಗಡು

10:29 AM Jul 25, 2017 | |

ಡಾ.ದೊಡ್ಡರಂಗೇಗೌಡ ಅವರ ಕುರಿತು ತಯಾರಾಗಿರುವ “ಹಳ್ಳಿಸೊಗಡು’ ಚಿತ್ರ ಶ್ರಾವಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.  ನೃತ್ಯ ನಿರ್ದೇಶಕ ಕಪಿಲ್‌ ನಿರ್ದೇಶನದ ಮೊದಲ ಚಿತ್ರವಿದು. ಸಂಗೀತ ಸಾಧನೆಗೆ ಸ್ಫೂರ್ತಿಯಾಗಿ ಗುರುವಿಗೆ ನಿಜವಾದ ಗುರು ಕಾಣಿಕೆ ನೀಡಿದ ಶಿಷ್ಯನೊಬ್ಬನ ಕಥೆ ಇಲ್ಲಿದೆ.

Advertisement

ರಾಜೇಂದ್ರ ಸೂರಿ ಪ್ರೊಡಕ್ಷನ್‌ನಲ್ಲಿ ಪಿ.ಸತೀಶ್‌ ಕುಮಾರ್‌ ಮೆಹ್ತಾ ನಿರ್ಮಿಸಿರುವ ಈ ಚಿತ್ರದಲ್ಲಿ ಆರವ್‌ ಸೂರ್ಯ ನಾಯಕರಾದರೆ, ಅಕ್ಷರಾ ನಾಯಕಿಯಾಗಿದ್ದಾರೆ. ಶ್ರೀನಾಥ್‌ ಕ್ಯಾಮೆರಾ ಹಿಡಿದಿದ್ದಾರೆ. ರಾಘರಮಣ ಅವರು ಸಂಗೀತ ನೀಡಿದ್ದಾರೆ. ಕೆ.ಬಿ.ಪಂಕಜ ಅವರು ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಹೆಚ್‌.ಎನ್‌. ದತ್ತಾತ್ರೇಯ, ಕೆ.ಎಸ್‌. ಮಾಂತೇಶ್‌, ಬಿ.ಎನ್‌. ಸ್ವಾಮಿ, ರಚನಾ ರಂಗನಾಥ್‌  ಸಹ ನಿರ್ಮಾಪಕರಾಗಿದ್ದಾರೆ.

ಪ್ರಭಾಕರ್‌ ಸಂಕಲನ ಮಾಡಿದರೆ, ದೊಡ್ಡರಂಗೇಗೌಡ, ಭರತ್‌ ದೊಡ್ಡರಂಗೇಗೌಡ ಹಾಗೂ ಉದಯ ಲೇಖ ಅವರು ಗೀತೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಡಿಂಗ್ರಿ ನಾಗರಾಜ್‌, ಶಂಕರ್‌ಭಟ್‌, ರಮಾನಂದ್‌, ಅರವಿಂದ್‌, ಮೈಕಲ್‌ ಮಧು, ಮಹದೇವ್‌, ಹೆಚ್‌.ಎನ್‌. ಸಿದ್ಧಪ್ಪ, ಜ್ಯೋತಿ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next