Advertisement

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

01:23 AM Apr 29, 2024 | Team Udayavani |

ಜಮ್ಮು: ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯ ಗ್ರಾಮದಲ್ಲಿ ಉಗ್ರರು ಗ್ರಾಮ ರಕ್ಷಣ ಸಿಬಂದಿಯೊಬ್ಬರನ್ನು ಹತ್ಯೆಗೈದಿದ್ದಾರೆ. ಪಾಕಿಸ್ಥಾನದಿಂದ ಒಳನುಸುಳಿದ್ದ ಉಗ್ರರು ಈ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ, ಪೊಲೀಸರ ಗಸ್ತು ಪಡೆ ಮತ್ತು ಗ್ರಾಮ ರಕ್ಷಣ ಪಡೆಯ ಸಿಬಂದಿ ಅಲರ್ಟ್‌ ಆದರು. ಎರಡೂ ಕಡೆ ಕೆಲವು ಹೊತ್ತು ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಸಿಬಂದಿ ಮೊಹಮ್ಮದ್‌ ಶರೀಫ್ ಮೃತಪಟ್ಟಿದ್ದಾರೆ. ಉಗ್ರರು ಅರಣ್ಯದೊಳಕ್ಕೆ ನುಗ್ಗಿ ಪರಾರಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next