Advertisement

ಶ್ರದ್ಧಾ ವಾಕರ್‌ ಪ್ರಕರಣದ ಪರಿಣಾಮದಿಂದ ತುನಿಶಾಳಿಂದ ಬ್ರೇಕಪ್‌ ಮಾಡಿಕೊಂಡೆ;  ಸಹ ನಟ ಶೀಜನ್

04:13 PM Dec 26, 2022 | Team Udayavani |

ಮುಂಬಯಿ: ಕಿರುತೆರೆ ನಟಿ ತುನಿಶಾ ಪ್ರಕರಣಕ್ಕೆ ಸಂಬಂಧಿಸಿ, ಬಂಧಿತನಾಗಿರುವ ಸಹ ನಟ ಶೀಜನ್ ಮೊಹಮ್ಮದ್ ಖಾನ್ ಘಟನೆ ಸಂಬಂಧ ಪೊಲೀಸರ ತನಿಖೆಗೆ ಸಹಕರಿಸಿ, ಹಲವಾರು ವಿಷಯಗಳನ್ನು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಮಹಾರಾಷ್ಟ್ರ ಪೊಲೀಸ್‌ ಕಸ್ಟಡಿಯಲ್ಲಿ ಶೀಜನ್‌ ವಿಚಾರಣೆಯಲ್ಲಿ ತುನಿಶಾಳೊಂದಿಗೆ ಬ್ರೇಕಪ್‌  ಮಾಡಿಕೊಂಡ ಹಿಂದೆ ಶ್ರದ್ಧಾ ವಾಕರ್‌ ಘಟನೆ ಕಾರಣ. ಆ ಭೀಕರ ಘಟನೆ ನನ್ನ ಮೇಲೆ ಪರಿಣಾಮ ಬೀರಿತ್ತು. ನಾನು ತುನಿಶಾಳ ಬಳಿ ಶ್ರದ್ಧಾ ಪ್ರಕರಣದ ಬಗ್ಗೆ ಮಾತಾನಾಡಿ, ನಾನು ಬೇರೆ ಸಮುದಾಯಕ್ಕೆ ಸೇರಿದವ. ನಮ್ಮ ನಡುವೆ ವಯಸ್ಸಿನ ಅಂತರವೂ ಇದೆ ಎಂದು ಹೇಳಿದ್ದೆ. ಇದಲ್ಲದೆ ಕೆಲ ದಿನಗಳ ಹಿಂದೆಯೂ ತುನಿಶಾ ಆತ್ಮಹತ್ಯೆಗೆ ಯತ್ನಿಸಿದ್ದಳು, ಆಗ ನಾನು ಆಕೆಯನ್ನು ರಕ್ಷಿಸಿ, ಅವಳ ಅಮ್ಮನ ಬಳಿ ಆರೋಗ್ಯ ನೋಡಿಕೊಳ್ಳುವಂತೆ ಹೇಳಿದ್ದೆ ಎಂದು ಪೊಲೀಸರಿಗೆ ಶೀಜನ್‌ ಹೇಳಿದ್ದಾರೆ.

ಇದನ್ನೂ ಓದಿ: ‌ಕೋವಿಡ್‌ ಭೀತಿ: ಶಾಲಾ -ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ; ಇಲ್ಲಿದೆ ಹೊಸ ಗೈಡ್‌ ಲೈನ್ಸ್

ತುನಿಶಾಳ ತಾಯಿ ಶೀಜನ್‌ ನನ್ನ ಮಗಳಿಗೆ ಮೋಸ ಮಾಡಿ, ಆಕೆಯನ್ನು ಬಳಸಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತುನಿಶಾ ಹಾಗೂ ಶೀಜನ್‌ ಅವರ ಮೊಬೈಲ್‌ ಕಳುಹಿಸಲಾಗಿದ್ದು, ಇಬ್ಬರು ಏನೆಲ್ಲಾ ಚಾಟ್‌ ಮಾಡಿದ್ದರು ಎನ್ನುವುದು ಇದರಿಂದ ತಿಳಿದು ಬರಲಿದೆ.

Advertisement

ತುನಿಶಾ ಡಿ.24 ರಂದು ಟಿವಿ ಧಾರಾವಾಹಿಯ ಸೆಟ್‌ನಲ್ಲಿ ನೇಣು ಬಿಗಿದುಕೊಂಡಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next