Advertisement

POK ಅನ್ನು ನಾವು ಬಿಟ್ಟು ಬಿಡಬೇಕೆ?: ಮಣಿಶಂಕರ್ ಹೇಳಿಕೆಗೆ ಶಾ ಕಿಡಿ

08:13 PM May 12, 2024 | Team Udayavani |

ಪ್ರತಾಪಗಢ(ಯುಪಿ): “ಪಾಕಿಸ್ಥಾನದಲ್ಲಿ ಪರಮಾಣು ಬಾಂಬ್‌ಗಳಿವೆ” ಎಂಬ ಟೀಕೆಗಳ ಕುರಿತು ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ತೀವ್ರ ವಾಗ್ದಾಳಿ ನಡೆಸಿದರು.

Advertisement

ಕೌಶಂಬಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ,”ಮಣಿಶಂಕರ್ ಅಯ್ಯರ್ ಮತ್ತು ಫಾರೂಕ್ ಅಬ್ದುಲ್ಲಾ ಅವರು ಪಾಕಿಸ್ಥಾನಡಾ ಬಳಿ ಅಣುಬಾಂಬ್ ಇರುವುದರಿಂದ ಅವರನ್ನು ಗೌರವಿಸಿ, ಪಾಕ್ ಆಕ್ರಮಿತ ಕಾಶ್ಮೀರವನ್ನು ಕೇಳಬೇಡಿ ಎಂದು ಹೇಳುತ್ತಾರೆ. ರಾಹುಲ್ ಬಾಬಾ, ನೀವು ಆಟಮ್ ಬಾಂಬ್‌ಗೆ ಹೆದರಬೇಕಾದರೆ ಹೆದರಿ. ನಾವು ಹೆದರುವುದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ನಾವು ಅದನ್ನು ಪಡೆದುಕೊಳ್ಳುತ್ತೇವೆ” ಎಂದರು.

ಅಯ್ಯರ್ ಅವರ ವಿವಾದಾತ್ಮಕ ಹೇಳಿಕೆಯಿಂದ ದೂರ ಉಳಿದಿರುವ ಕಾಂಗ್ರೆಸ್, ಈ ವಿಡಿಯೋ ಕೆಲವು ತಿಂಗಳ ಹಿಂದಿನದ್ದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next