Advertisement

ರಾಹುಲ್‌ ಗಾಂಧಿ ಬಚ್ಚಾ …! ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ 

12:14 PM Jul 06, 2017 | |

ಕಲಬುರಗಿ :  ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಿಂದ ಇಡೀ ಪ್ರಪಂಚವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಅವರ ಬಗ್ಗೆ ರಾಹುಲ್‌ ಗಾಂಧಿಯಂತಹ ಒಬ್ಬ ಬಚ್ಚಾ ನಿಗೆ ಟೀಕೆ ಮಾಡುವ ನೈತಿಕ ಹಕ್ಕಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್‌ದಾಳಿ ನಡೆಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೇರಿಕದಲ್ಲಿ ಹೇಗೆ ಸ್ವಾಗತಿಸಿ ಗೌರವ ನೀಡಲಾಯಿತು ಎನ್ನುವುದನ್ನು ವಿಶ್ವವೇ ನೋಡಿದೆ. ಅವರು 70 ವರ್ಷಗಳಲ್ಲಿ ಇಸ್ರೇಲ್‌ ಪ್ರವಾಸ ಮಾಡುವ ಎದೆಗಾರಿಕೆ ತೋರಿಸಿದ್ದಾರೆ. ಗಡಿ ರಕ್ಷಣೆ , ಸಶಸ್ತ್ರ ಸ್ವಾವಲಂಬನೆ ಮಾಡುವತ್ತ ಹೊರಟಿದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೆ ಗೌರವವಿದ್ದು ರಾಹುಲ್‌ ಗಾಂಧಿಯಂತಹ ಬಚ್ಚಾನಿಗೆ ಟೀಕೆ ಮಾಡುವ ನೈತಿಕತೆ ಇಲ್ಲ. ಮೊದಲು ಅವರ ಪಕ್ಷದಲ್ಲಿನ ಹುಳುಕನ್ನು ಸರಿಪಡಿಸಲಿ’ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next