Advertisement

ಸುನ್ನಿ ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

06:36 PM Nov 16, 2021 | Adarsha |

ಶಿವಮೊಗ್ಗ: ತ್ರಿಪುರಾದಲ್ಲಿ ಮುಸ್ಲಿಂಸಮುದಾಯದ ಮೇಲೆ ನಡೆದ ದೌರ್ಜನ್ಯಖಂಡಿಸಿ ಸುನ್ನಿ ಜಮಾತ್‌ ವುಲ್‌ ಉಲೇಮಾಕಮಿಟಿ ವತಿಯಿಂದ ಸೋಮವಾರ ಈದ್ಗಾಮೈದಾನದಲ್ಲಿ ಪ್ರತಿಭಟನೆ ನಡೆಸಲಾಯಿತು.ತ್ರಿಪುರಾದ ಅಗರ್ತಲಾ ಪ್ರದೇಶದಲ್ಲಿಮುಸ್ಲಿಮರಮೇಲೆದೌರ್ಜನ್ಯನಡೆದಿರುವುದು ಖಂಡನೀಯ. ಮನುಷ್ಯಕ್ರೂರನಾಗುತ್ತಿದ್ದಾನೆ.

Advertisement

ಧರ್ಮಗಳು ಮನುಷ್ಯರನ್ನುಒಳ್ಳೆಯವರನ್ನಾಗಿ ಮಾಡಬೇಕು. ಆದರೆ,ಮಾನವ ಸಂಕುಚಿತ ಸರಪಳಿಗಳಿಂದಇವುಗಳನ್ನು ಕಟ್ಟಿ ಹಾಕಿರುವುದರಿಂದಇಂಥ ಸ್ವಾರ್ಥ ಕೃತ್ಯಗಳು ನಡೆಯುತ್ತವೆ.ಧಮಾಂìಧರು ಸದ್ಭಾವನೆಗಳನ್ನೇ ಮರೆತುದುರ್ಭಾವನೆಗಳಿಂದ ಇಂತಹ ವಿಕೃತಿಮೆರೆಯುತ್ತಿದ್ದಾರೆಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಈ ಘಟನೆ ಪ್ರಜಾಪ್ರಭುತ್ವಕ್ಕೆಆಘಾತಕಾರಿಯಾಗಿದೆ. ಧರ್ಮದ ಹೆಸರಲ್ಲಿಕೆಲವು ಕಿಡಿಗೇಡಿಗಳು ಜಾತಿಯ ವಿಷ ಬೀಜಬಿತ್ತಿ ಸಾಮರಸ್ಯ ಹಾಳುಮಾಡುತ್ತಿದ್ದಾರೆಎಂದು ದೂರಿದರು.ಶಿಯಾಪಂಗಡಕ್ಕೆಸೇರಿದವಸೀಂರಿಜ್ವೆಎಂಬವ್ಯಕ್ತಿ ಪ್ರವಾದಿ ಹಜರತ್‌ ಮೊಹ್ಮದ್‌ ಅವರಮೇಲೆ ಅವಹೇಳನಕಾರಿ ಹೇಳಿಕೆ ನೀಡಿ ಸುನ್ನಿಪಂಗಡದ ಮುಸ್ಲಿಂ ಸಮುದಾಯದವರನ್ನುನಿಂದಿಸಿದ್ದಾನೆ.

ಪ್ರವಾದಿಗಳ ಬಗ್ಗೆ ಏನೂಅರಿಯದೇ ಹೀಗೆ ಮಾತನಾಡುವುದು ತಪ್ಪು.ಇದಲ್ಲದೇ ಕುರಾನ್‌ ಬಗ್ಗೆ ಮಾತನಾಡುವುದುಕೂಡ ಸರಿಯಲ್ಲ. ಅಪವಿತ್ರ ಪುಸ್ತಕವನ್ನುಮುದ್ರಿಸಿ ಬಿಡುಗಡೆ ಮಾಡಿ ಕೋಮುಭಾವನೆ ಕೆರಳಿಸಿರುವುದು ಹೀನ ಕೃತ್ಯ ಎಂದುಪ್ರತಿಭಟನಾಕಾರರು ದೂರಿದರು.ರಿಜ್ವೆಯಂತಹ ಕಿಡಿಗೇಡಿಯನ್ನುಬಂಧಿಸಬೇಕು. ಇಂತಹ ಕೃತ್ಯಗಳುಮರುಕಳಿಸಬಾರದು.

ಭಾರತವನ್ನು ಬಲಿಷ್ಠರಾಷ್ಟÅವನ್ನಾಗಿ ನಿರ್ಮಾಣ ಮಾಡಲುಇಂತಹ ದುಷ್ಟರನ್ನು ಬಲಿ ಹಾಕಬೇಕುಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಇಕ್ಬಾಲ್‌ ಹಬೀಬ್‌ಸೇಟ್‌, ಅಬ್ದುಲ್‌ ಸತ್ತಾರ್‌, ಏಜಾಜ್‌ ಪಾಷಾ,ಅಫ್ತಾಬ್‌ ಫರ್ವೀಜ್‌, ಮುನಾವರ್‌ ಪಾಷಾ,ಅನ್ಸರ್‌ ಅಹಮ್ಮದ್‌, ಮುಫ್ತಿ ಅಕಿಲ್‌ ರಾಜ್‌,ಖಾಜಿ ಅಶ್ರಫ್‌ ಸಾಬ್‌ ಸೇರಿದಂತೆ ಅಪಾರಜನ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next