Advertisement

ಶಿವಮೊಗ್ಗ: ಮೊಮ್ಮಗನಿಂದಲೇ ಅಜ್ಜಿಯ ಕೊಲೆ

02:49 PM Jul 08, 2020 | mahesh |

ಶಿವಮೊಗ್ಗ: ಮದ್ಯಪಾನ ಮಾಡಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮೊಮ್ಮಗನೇ ಅಜ್ಜಿಯನ್ನೇ ಕೊಲೆ ಮಾಡಿದ ಘಟನೆ ಭದ್ರಾವತಿ ತಾಲೂಕಿನ ತಾಷ್ಕೆಂಟ್ ಕಾಲನಿಯಲ್ಲಿ‌ ನಡೆದಿದೆ.

Advertisement

ಕಿಟ್ಟಮ್ಮ(60) ಕೊಲೆಯಾದ ವೃದ್ಧೆ. ಅರುಣ್(26) ಅಜ್ಜಿಯನ್ನೇ ಕೊಲೆ ಮಾಡಿದ ಪಾಪಿ ಮೊಮ್ಮಗ. ಅಜ್ಜಿಯ ಕುತ್ತಿಗೆ ಹಾಗೂ ತಲೆಗೆ ಹೊಡೆದು ಕೊಲೆ‌ ಮಾಡಿದ್ದನೆಂದು ತಿಳಿದು ಬಂದಿದೆ.

ಅಜ್ಜಿಯ ಮೇಲೆ‌ ಹಲ್ಲೆ ನಡೆಸುವುದನ್ನು ಕಂಡ ಪಕ್ಕದ ಮನೆಯ ಪಾಪಮ್ಮ ತಡೆಯಲು ಬಂದಿದ್ದು,  ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಪಾಪಮ್ಮಗೆ ಗಂಭೀರ ಗಾಯಗಳಾಗಿದ್ದು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭದ್ರಾವತಿ ಸರ್ಕಾರಿ‌ ಆಸ್ಪತ್ರಗೆ ದಾಖಲಿಸಲಾಗಿದೆ.  ಅಜ್ಜಿಯನ್ನು ಕೊಲೆ ಮಾಡಿದ ಪಾಪಿ ಮೊಮ್ಮಗನಿಗೆ ಊರಿನವರು ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next