Advertisement

ಕೋಟ್ಯಂತರ ಮನಸುಗಳ ಕನಸು ಸಾಕಾರವಾದ ದಿನ: ಸಂಸದ ಉದಾಸಿ

02:09 PM Aug 06, 2020 | sudhir |

ಹಾನಗಲ್ಲ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿರುವುದು ಐತಿಹಾಸಿಕ ಮತ್ತು ಭಾವಪೂರ್ಣ ಕ್ಷಣವಾಗಿದೆ. ಕೋಟ್ಯಂತರ ಮನಸುಗಳ ಕನಸು ಸಾಕಾರಗೊಂಡ ದಿನವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಬಣ್ಣಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾಜಪ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾನಿ, ಮುರಳಿ ಮನೋಹರ ಜೋಶಿ ಮತ್ತು ರಾಮ ಮಂದಿರ ನಿರ್ಮಾಣದ ನಿರಂತರ ಹೋರಾಟದಲ್ಲಿ ಭಾಗವಹಿಸಿದ ಮುಖಂಡರು, ನಾಯಕರು, ಕಾರ್ಯಕರ್ತರು, ಅಖಂಡ ನಿಷ್ಠೆ, ತ್ಯಾಗ ಬಲಿದಾನಗೈದ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿ ದ್ದಾರೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಕೀರ್ತಿ ಪತಾಕೆ ಹಾರಿಸಿರುವ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ಸಾಧನೆ, ಇಚ್ಛಾಶಕ್ತಿಯಿಂದ ಇಡಿ ದೇಶಕ್ಕೆ ದೇಶವೇ ಸಡಗರ, ಸಂಭ್ರಮದಲ್ಲಿ
ತೊಡಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next