Advertisement

ಮುಂಬಯಿ: ಶಿವಸೇನಾ ನಾಯಕ ಅಶೋಕ್‌ ಸಾವಂತ್‌ ಇರಿದು ಕೊಲೆ

11:08 AM Jan 08, 2018 | Team Udayavani |

ಮುಂಬಯಿ : ಮುಂಬಯಿಯ ಕಾಂದಿವಿಲಿಯಲ್ಲಿ ನಿನ್ನೆ ಭಾನುವಾರ ಶಿವಸೇನೆಯ ನಾಯಕ ಅಶೋಕ್‌ ಸಾವಂತ್‌ ಅವರನ್ನು ಹಂತಕರು ಇರಿದು ಕೊಂದಿರುವ ಘಟನೆ ನಡೆದಿದೆ.

Advertisement

ಸಾವಂತ್‌ ಅವರು ನಿನ್ನೆ ರಾತ್ರಿ 10.45ರ ಹೊತ್ತಿಗೆ ತನ್ನ ಸ್ನೇಹಿತರೋರ್ವರನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದಾಗ ಅವರನ್ನು ಹಂತಕರು ಇರಿದು ಕೊಂದರು. ಮುಂಬಯಿಯ ಮಾಜಿ ಕಾರ್ಪೊರೇಟರ್‌ ಕೂಡ ಆಗಿರುವ ಸಾವಂತ್‌ ಅವರು ತಮ್ಮ ಮೇಲೆ ಮಾರಣಾಂತಿಕ ದಾಳಿ ನಡೆದಾಗ ತಮ್ಮ ಮನೆಯಿಂದ ಕೇವಲ 200 ಮೀಟರ್‌ ದೂರದಲ್ಲಿದ್ದರು.

ಸಮತಾ ನಗರದಲ್ಲಿನ ಸುರ್‌ ಕಟ್ಟಡದಲ್ಲಿನ ಸಾವಂತ್‌ ಅವರ ಮನೆಯ ಮುಂದೆ ವಾಹನವೊಂದರಲ್ಲಿ ಕಾಯುತ್ತಿದ್ದ ಹಂತಕರು ಸಾವಂತ್‌ ಅವರನ್ನು ಕಂಡಾಕ್ಷಣ ಅವರ ಬಳಿ ಸಾರಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ತಮ್ಮಲ್ಲಿನ ಹರಿತವಾ ಆಯುಧವನ್ನು ಝಳಪಿಸಿ ಸಾವಂತ್‌ ಅವರನ್ನು ಬಲವಾಗಿ ಇರಿದು ಸ್ಥಳದಿಂದ ಪರಾರಿಯಾದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ 62ರ ಹರೆಯದ ಸಾಂವತ್‌ ಅವರನ್ನು ಸ್ಥಳೀಯರು ಒಡನೆಯೇ ಆಸ್ಪತ್ರೆಗೆ ಒಯ್ದರು. ಆದರೆ ಅಲ್ಲಿನ ವೈದ್ಯರು ಸಾವಂತ್‌ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. 

ಐಪಿಸಿ ಸೆ.302ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕೊಲೆ ನಡೆದ ತಾಣದಲ್ಲಿನ ಸಿಸಿಟಿಟಿವಿಯಲ್ಲಿ ದಾಖಲಾದ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ. 

Advertisement

ಮಾಧ್ಯಮ ವರದಿಗಳ ಪ್ರಕಾರ ಹತ ಸಾವಂತ್‌ ಅವರು ಈಚೆಗೆ ಕೇಬಲ್‌ ಉದ್ಯಮವನ್ನು ಪ್ರವೇಶಿಸಿದ್ದರು. ಅವರಿಗೆ ಕೆಲವು ದಿನಗಳಿಂದ ಸುಲಿಗೆ ಕರೆಗಳು ಬರುತ್ತಿದ್ದವು. 

ಸಾವಂತ್‌ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next