Advertisement

ಶಿರಿಯಾರ ಗ್ರಾ.ಪಂ.‌ ಮಾಜಿ ಅಧ್ಯಕ್ಷ ಗುಂಡು ಮರಕಾಲ ಹೃದಯಾಘಾತದಿಂದ ನಿಧನ

10:49 AM Jul 08, 2021 | Team Udayavani |

ಕೋಟ: ಶಿರಿಯಾರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಾಹೇಬ್ರಕಟ್ಟೆ ಸಮೀಪ ಜಂಬೂರು ನಿವಾಸಿ ಗುಂಡು ಮರಕಾಲ (46 ವ) ಹೃದಯಾಘಾತದಿಂದ ಇಂದು ಬೆಳಗಿನ ಜಾವ ನಿಧನ ಹೊಂದಿದರು.

Advertisement

ಮೃತರು, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಶಿರಿಯಾರ ಗ್ರಾ.ಪಂ. ಮೂರು ಅವಧಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದರು ಹಾಗೂ ಸಾಹೇಬ್ರಕಟ್ಟೆ ರಿಕ್ಷಾ ಯೂನಿಯನ್ ಮುಖಂಡರಾಗಿ ಗುರುತಿಸಿಕೊಂಡಿದ್ದರು.

ವಿಧಾನ ಪರಿಷತ್ ಮಾಜಿ‌ ಸಭಾಪತಿ, ಹಾಲಿ ಸದಸ್ಯ‌ ಪ್ರತಾಪಚಂದ್ರ ಶೆಟ್ಟಿ, ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಿರಿಯಾರ ವ್ಯವಸಾಯ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಸೇರಿದಂತೆ ನೂರಾರು ಮಂದಿ ಗಣ್ಯರು ಮೃತರ  ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next