Advertisement

Shiriya bridge;ಆ್ಯಂಬುಲೆನ್ಸ್‌-ಟಾಟಾ ಸುಮೋ ಢಿಕ್ಕಿ; ರೋಗಿ ಸಾವು;14 ವಿದ್ಯಾರ್ಥಿಗಳಿಗೆ ಗಾಯ

01:30 AM Jan 17, 2024 | Team Udayavani |

ಕುಂಬಳೆ: ಶಿರಿಯ ಸೇತುವೆ ಬಳಿ ಆ್ಯಂಬುಲೆನ್ಸ್‌ ಹಾಗೂ ಟಾಟಾ ಸುಮೋ ಢಿಕ್ಕಿ ಹೊಡೆದು 14 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ರೋಗಿ ಸಾವಿಗೀಡಾದ ಘಟನೆ ಸಂಭವಿಸಿದೆ.

Advertisement

ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಕಣ್ಣೂರು ಕಾಟಾಚರ ನಿವಾಸಿ ಸುರೇಶ್‌ ಕುಮಾರ್‌ (50) ಮೃತಪಟ್ಟರು. ಅಪಘಾತದಲ್ಲಿ ಗಾಯಗೊಂಡ ಮುಟ್ಟಂನ ಖಾಸಗಿ ಶಾಲಾ ವಿದ್ಯಾರ್ಥಿಗಳಾದ ಮೊಗ್ರಾಲ್‌ ಪುತ್ತೂರು ನಿವಾಸಿ ನಿಬಿಲ (14), ಮೊಗ್ರಾಲ್‌ ನಿವಾಸಿಗಳಾದ ನಸ್ರಿಯಾ (11), ಬಾಶಿಲ(13), ಬಾಸಿತ್‌ (8), ಮೊಹಮ್ಮದ್‌ ಬಾಕಿರ್‌ (15), ಮೊನುದ್ದೀನ್‌ ಬಾರಿಶ (11) ಅವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ 8 ಮಂದಿಯನ್ನು ಬಂದ್ಯೋಡ್‌ನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಮೋನಿಯ ಬಾಧಿಸಿ ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್‌ ಕುಮಾರ್‌ ಅವರನ್ನು ಐಸಿಯು ಸೌಕರ್ಯವುಳ್ಳ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು. ಶಿರಿಯ ಸೇತುವೆ ಬಳಿ ತಲುಪಿದಾಗ ಅಪಘಾತ ಸಂಭವಿಸಿದೆ.

ಘಟನೆಗೆ ಸಂಬಂಧಿಸಿ ಆ್ಯಂಬುಲೆನ್ಸ್‌ ಚಾಲಕ ಪರಿ ಯಾರಂನ ವಿತಿನ್‌ ವಿರುದ್ಧ ಪೊಲೀಸರು ಕೇಸು ದಾಖ ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next