Advertisement

Shimoga; ಇಂದು ಯುವನಿಧಿ ಯೋಜನೆಗೆ ಚಾಲನೆ; ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ

12:20 PM Jan 12, 2024 | keerthan |

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಗೆ ಶುಕ್ರವಾರ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ. ಮಧ್ಯಾಹ್ನ 1 ಗಂಟೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

Advertisement

ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ನಡೆಸಲಾಗಿದ್ದು, ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಕೊಂಡಿದೆ. ಊಟಕ್ಕೆ ಪಲಾವ್, ಮೊಸರನ್ನ, ಕೊಬ್ಬರಿ ಬರ್ಫಿ, ಬಜ್ಜಿ ಸಿದ್ದ ಮಾಡಲಾಗಿದೆ. ಅಡುಗೆ ತಯಾರಿ ಹಾಗೂ ಊಟ ಬಡಿಸಲು 850 ಜನರ ನಿಯೋಜನೆ ಮಾಡಲಾಗಿದೆ.

ಊಟ ನೀಡುವ ಜಾಗದಲ್ಲಿ ನೂಕು ನುಗ್ಗಲಾಗಬಾರದೆಂದು ಮೂರು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 160 ಕೌಂಟರ್ ನಲ್ಲಿ ಊಟ ನೀಡಲು ಕ್ರಮ ಕೈಗೊಂಡಿದ್ದು, ಸಾವಿರಾರು ಮಂದಿ ಒಂದೇ ಬಾರಿಗೆ ಊಟಕ್ಕೆ ಬಂದರೂ ನಿಭಾಯಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತವು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next