Advertisement

ಶಿವಮೊಗ್ಗ : ಕೋವಿಡ್ ಗೆದ್ದಿದ್ದ ಖೈದಿ ಸಾವು

06:52 PM May 26, 2021 | Team Udayavani |

ಶಿವಮೊಗ್ಗ : ಕೋವಿಡ್ ಪಾಸಿಟಿವ್ ಸೋಂಕಿನಿಂದ ಗುಣಮುಖರಾಗಿ ವಿಶ್ರಾಂತಿ ಪಡೆಯುತ್ತಿದ್ದ ಖೈದಿಯೊರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

Advertisement

ಇಸ್ಮಾಯಿಲ್ ಖಾನ್ (72) ಸಾವನ್ನಪ್ಪಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದ ಖೈದಿ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿಯಾಗಿದ್ದ ಇಸ್ಮಾಯಿಲ್ ಖಾನ್ , ಜಿಲ್ಲಾ ಖಜಾನೆ ಅಧಿಕಾರಿಯಾಗಿ ನಿವೃತ್ತಿಯಾಗಿದ್ದ . ಆದರೆ, ನಿವೃತ್ತಿಗೂ ಮುನ್ನ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ 1 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಇಸ್ಮಾಯಿಲ್ ಖಾನ್, ಕಳೆದ ಏಪ್ರಿಲ್ 5 ರಂದು 1 ವರ್ಷ ಸಾದಾ ಶಿಕ್ಷೆ ಮತ್ತು 1.5 ಲಕ್ಷ ದಂಡ ವಿಧಿಸಿ ಶಿವಮೊಗ್ಗ ಕೋರ್ಟ್ ಆದೇಶದನ್ವ ಜೈಲು ಸೇರಿದ್ದರು. ಆದರೆ,  ಕಾರಾಗೃಹ ಸೇರಿದ್ದ ಕೆಲವೇ ದಿನದಲ್ಲಿ  ಕೋವಿಡ್ ಪಾಸಿಟಿವ್ ಆಗಿ, ಆಸ್ಪತ್ರೆ ಸೇರಿದ್ದರು .  ಕೋವಿಡ್ ನಿಂದ ಗುಣಮುಖರಾಗಿ ಕೆಲ ದಿನಗಳ ಹಿಂದೆಯಷ್ಟೇ ಜೈಲಿಗೆ ವಾಪಸಾಗಿದ್ದರು. ಆದರೆ,  ಕಳೆದ ಮೇ 24 ರಂದು ಮತ್ತೇ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಹೃದಯಘಾತದಿಂದ ಸಾವನ್ನಪ್ಪಿರುವ ಇಸ್ಮಾಯಿಲ್ ಖಾನ್.

Advertisement

Udayavani is now on Telegram. Click here to join our channel and stay updated with the latest news.

Next