Advertisement

Shimoga; ಕೇಂದ್ರ ಸರಕಾರಕ್ಕೆ ‌ಇಡಿ ದಾಳಿ ಮಾಡಿಸುವ ಚಟವಿದೆ: ಸಚಿವ ಮಧು ಬಂಗಾರಪ್ಪ

12:40 PM Jul 11, 2024 | keerthan |

ಶಿವಮೊಗ್ಗ: ಇಡಿ ದಾಳಿಯನ್ನು ಎರಡು ರೀತಿಯಲ್ಲಿ ನೋಡಬೇಕು. ಕಾನೂನು ರೀತಿ ಆದರೆ ಸರಿ. ಕೇಂದ್ರ ಸರಕಾರಕ್ಕೆ ‌ಇಡಿ ದಾಳಿ ಮಾಡಿಸುವ ಚಟವಿದೆ. ಇಂತಹ ವಿಚಾರದಲ್ಲಿ ‌ಕಾನೂನು ಮೇಲಿರಬೇಕು. ಕಾನೂನು ದುರುಪಯೋಗ ಆಗಬಾರದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಮುಡಾ ಹಗರಣ ವಿಚಾರ ಹಿನ್ನೆಲೆಯಲ್ಲಿ ಬಿಜೆಪಿ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹೋರಾಟ ಮಾಡಿದರೆ ಮಾಡಿಕೊಳ್ಳಲಿ ಎಂದರು.

ಅಧಿಕಾರಿಗಳ ವರ್ಗಾವಣೆ ದಂಧೆ ಬಸವರಾಯರೆಡ್ಡಿ ಆರೋಪ‌ ವಿಚಾರಕ್ಕೆ ಮಾತನಾಡಿ, ಬಸವರಾಯರೆಡ್ಡಿ ಅವರು ಆ ರೀತಿ ಹೇಳಿಲ್ಲ. ಅವರು ಹೇಳಿದಾಗ ನಾನು ಪಕ್ಕದಲ್ಲೇ ಇದ್ದೆ. ದಂಧೆ ನಡೆದರೆ ನಿಲ್ಲಬೇಕು ಎಂದು ಹೇಳಿದರು ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next