Advertisement

Renukaswamy Case: ದರ್ಶನ್‌ಗೆ ರಾಜಾತಿಥ್ಯ; ಸರ್ಕಾರಕ್ಕೆ ಗಂಭೀರತೆ ಇಲ್ಲ: ಪ್ರಹ್ಲಾದ ಜೋಶಿ

08:59 PM Aug 26, 2024 | Team Udayavani |

ಹುಬ್ಬಳ್ಳಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲು ಆಗಿರುವ ಆರೋಪಿ,  ನಟ ದರ್ಶನ್‌ ಗೆ  ರಾಜಾತಿಥ್ಯ ನೀಡಿಕೆ ಕುರಿತಾಗಿ ರಾಜ್ಯಪಾಲರು, ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವೆ. ದರ್ಶನ್‌ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ  ವಿಫಲವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲವಾಗಿದೆ. ದರ್ಶನಗೆ ಜೈಲಿನಲ್ಲಿ‌ ರಾಜ್ಯಾತಿಥ್ಯ ನೀಡಿಕೆ ಬಗ್ಗೆ ಸಿಬ್ಬಂದಿಯ ಅಮಾನತು ಮಾಡಲಾಗಿದೆ.‌ ಇಷ್ಟು ದಿನ ಸರ್ಕಾರ ಕತ್ತೆ ಕಾಯುತ್ತಿತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದರ್ಶನಗೆ ರಾಜಾತಿಥ್ಯ ನೀಡಿಕೆಯಲ್ಲಿ ಕೆಲ ರಾಜಕಾರಣಿಗಳ ಹಸ್ತಕ್ಷೇಪವೂ ಇದೆ. ದರ್ಶನ್‌ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಲು ಯೋಜಿಸಿದಂತೆ ಕಾಣುತ್ತಿದೆ. ಸರ್ಕಾರವೇ ದರ್ಶನ್‌ ರಕ್ಷಣೆಗೆ ನಿಂತಿರುವಂತೆ ಗೋಚರಿಸುತ್ತಿದೆ. ಸರ್ಕಾರ ಏನೋ ಸಂಚು ಮಾಡುತ್ತಿದೆ ಎಂದೆನಿಸುತ್ತಿದೆ ಎಂದು ಕೇಂದ್ರ ಸಚಿವ ಜೋಶಿ ಸಂಶಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next