Advertisement

ಶಿವಮೊಗ್ಗ: ಲಾಂಗ್ ಹಿಡಿದು ಪುಂಡಾಟ ಮಾಡಿದ್ದ ಮೂವರ ಬಂಧನ

08:57 PM Oct 25, 2022 | Team Udayavani |

ಶಿವಮೊಗ್ಗ: ಸೀಗೆಹಟ್ಟಿ ಮತ್ತು ಭರ್ಮಪ್ಪ ನಗರದಲ್ಲಿ ಸೋಮವಾರ ರಾತ್ರಿ ಯುವಕರ ದಾಂಧಲೆ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.

Advertisement

ಬಂಧಿತರು ಮಾರ್ಕೆಟ್ ಫೌಜಾನ್ (22), ಅಜರ್ ಅಲಿಯಾಸ್ ಅಜ್ಜು (21) ಮತ್ತು ಫರಾಜ್ ಎನ್ನುವವರಾಗಿದ್ದಾರೆ.

ನಿನ್ನೆ ರಾತ್ರಿ 2 ಬೈಕ್ ಗಳಲ್ಲಿ ಬಂದು ದಾಂಧಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದು, ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲಾಗಿವೆ.

ಮಾರ್ಕೆಟ್ ಫೌಜಾನ್ ಮೇಲೆ ಈ ಹಿಂದೆ 5 ಪ್ರಕರಣಗಳು ದಾಖಲಾಗಿದ್ದು, ಅಜರ್ ಮೇಲೆ 3 ಪ್ರಕರಣಗಳು, ಫರಾಜ್ ಮೇಲೆ 4 ಕೇಸುಗಳು ದಾಖಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಹರ್ಷನ ಮನೆ ಬಳಿ ಲಾಂಗು ಮಚ್ಚು ಹಿಡಿದು ಪುಂಡಾಟ ಮೆರೆದ ದುಷ್ಕರ್ಮಿಗಳು: ಸ್ಥಳೀಯರು ಹೇಳಿದ್ದೇನು

Advertisement

ರಾತ್ರಿ ಮಚ್ಚು, ಲಾಂಗುಗಳನ್ನು ಹಿಡಿದು ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹರ್ಷ  ಮನೆಯ ಬಳಿಯೇ ದುಷ್ಕರ್ಮಿಗಳ ತಂಡ ಲಾಂಗು ಮಚ್ಚುಗಳನ್ನು ಹಿಡಿದು ಪುಂಡಾಟ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದರು.

ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಕಲ್ಲುತೂರಾಟ ನಡೆಸಿ ಗಂಭೀರ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next