Advertisement

ವಿಂಡೀಸ್ ವಿರುದ್ಧ ಏಕದಿನ ಸರಣಿಗೂ ಧವನ್ ಅನುಮಾನ: ಮಯಾಂಕ್ ಗೆ ಸ್ಥಾನ?

10:07 AM Dec 11, 2019 | keerthan |

ಮುಂಬೈ: ಗಾಯದ ಸಮಸ್ಯೆಯಿಂದಾಗಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಮುಂದಿನ ಏಕದಿನ ಸರಣಿಯನ್ನು ಆಡುವುದೂ ಅನುಮಾನ ಎನ್ನಲಾಗಿದೆ.

Advertisement

ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಆಡುವಾಗ ಗಾಯಗೊಂಡಿದ್ದರು. ಇದರಿಂದಾಗಿ ವಿಂಡೀಸ್ ವಿರುದ್ಧ ಟಿ ಟ್ವೆಂಟಿ ಸರಣಿಯಿಂದಲೂ ಔಟ್ ಆಗಿದ್ದರು.

ಆದರೆ ಸದ್ಯದ ವರದಿಯ ಪ್ರಕಾರ ಧವನ್ ಇನ್ನೂ ಫಿಟ್ ಆಗಿಲ್ಲ. ಅವರ ಗಾಯದ ಸಮಸ್ಯೆ ಇನ್ನೂ ಸರಿಯಾಗಿಲ್ಲ. ಹೀಗಾಗಿ ಏಕದಿನ ಸರಣಿಯಿಂದಲೂ ಔಟ್ ಆಗಲಿದ್ದಾರೆ.

ಟಿ ಟ್ವೆಂಟಿ ಸರಣಿಗೆ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದರು. ಆದರೆ ಏಕದಿನ ಸರಣಿಯಿಂದ ಧವನ್ ಹೊರಬಿದ್ದಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಆಯ್ಕೆಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next