Advertisement

ಶೆಟ್ಟರ್‌, ಈಶ್ವರಪ್ಪ ರಾಷ್ಟ್ರಪತಿ ಕ್ಷಮೆ ಕೋರಲಿ: ಉಗ್ರಪ್ಪ

07:00 AM Oct 27, 2017 | |

ಬೆಂಗಳೂರು: ಟಿಪ್ಪು ಸುಲ್ತಾನ್‌ ವಿಚಾರ ಮುಂದಿಟ್ಟುಕೊಂಡು ದೇಶದ ಪ್ರಥಮ ಪ್ರಜೆಯ ಬಗ್ಗೆ ಕೊಂಕು ಮಾತುಗಳನ್ನಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಕೂಡಲೇ ರಾಷ್ಟ್ರಪತಿಗಳ ಕ್ಷಮೆ ಕೇಳಬೇಕು ಎಂದು ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ರಾಜ್ಯದ ಇತಿಹಾಸದ ಬಗ್ಗೆ ಸ್ಪಷ್ಟ ಸಂಗತಿಗಳನ್ನು ಜನತೆಯ ಮುಂದಿಟ್ಟಿದ್ದಾರೆ.

ಆದರೆ, ಅವರ ಬಗ್ಗೆ ಕೊಂಕು ಮಾತನಾಡುವ ಮೂಲಕ ಬಿಜೆಪಿ ಮುಖಂಡರು ತಮ್ಮ ಬೌದಿಟಛಿಕ ದಿವಾಳಿತನ ತೋರಿಸಿದ್ದಾರೆ. ಅಲ್ಲದೆ, ಬಿಜೆಪಿ ಮುಖಂಡರು ರಾಷ್ಟ್ರಪತಿಗೆ ಅವಮಾನ ಮಾಡಿದ್ದಾರೆ ಎಂದರು. ವಜ್ರ ಮಹೋತ್ಸವ ಸಂದರ್ಭದಲ್ಲಿ ನಡೆದದ್ದು ಜಂಟಿ ಅಧಿವೇಶನ ಅಲ್ಲ. ಜಂಟಿ ಸಭೆಯಷ್ಟೇ. ಏಕೆಂದರೆ ಜಂಟಿ ಅಧಿವೇಶನ ನಡೆಯಬೇಕಾದರೆ ಸಚಿವ ಸಂಪುಟದ ಅನುಮೋದನೆ ಸಿಗಬೇಕು. ಆದರೆ, ಬುಧವಾರ ನಡೆದ ಅಧಿವೇಶನಕ್ಕೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿರಲಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next