Advertisement

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

12:56 AM Oct 19, 2024 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಹಿಡಿತದಿಂದ ಹೊರ ಬರಬೇಕು. ಹೊಂದಾಣಿಕೆ ಮತ್ತು ಕುಟುಂಬ ರಾಜಕಾರಣದ ಶುದ್ಧೀಕರಣ ಆಗುವವರೆಗೂ ಬಿಜೆಪಿಗೆ ಮರಳಿ ಹೋಗುವುದಿಲ್ಲ. ಇಂದಲ್ಲ-ನಾಳೆ ಶುದ್ಧೀಕರಣ ಆಗುತ್ತದೆ ಎಂಬ ಆಶಾಭಾವ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು ಸುದ್ದಿಗಾರರಲ್ಲಿ ಹೇಳಿದರು.

Advertisement

ಅಮಿತ್‌ ಶಾ ಮಾತಿಗೆ ಕಟ್ಟುಬಿದ್ದು ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬಿಟ್ಟು ತಪ್ಪು ಮಾಡಿದೆ. ಇಡೀ ರಾಜ್ಯದ ಜನ ಮತ್ತೆ ಬ್ರಿಗೇಡ್‌ ಕಟ್ಟುವಂತೆ ಆಗ್ರಹಿತ್ತಿದ್ದಾರೆ. ಅ. 20ರಂದು ಅದಕ್ಕೆ ಅಂತಿಮ ರೂಪ ನೀಡಲಿದ್ದೇವೆ. ಮುಂದೆ ಯಾವುದೇ ಕಾರಣಕ್ಕೂ ಹೊಸ ಬ್ರಿಗೇಡ್‌ ಮಾಡುವುದಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next