Advertisement

ಬಾಂಗ್ಲಾದೇಶದಿಂದ ಪರಾರಿಯಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಕುರಿತು ಪುತ್ರ ಹೇಳಿದ್ದೇನು?

08:55 AM Aug 08, 2024 | Team Udayavani |

ಢಾಕಾ: ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದು ಭಾರತದಲ್ಲಿ ತಾತ್ಕಾಲಿಕ ಆಶ್ರಯದಲ್ಲಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ, ಬೇರೆ ಯಾವುದೇ ದೇಶದಲ್ಲೂ ಆಶ್ರಯ ಕೋರಿಲ್ಲ ಎಂದು ಹಸೀನಾರ ಪುತ್ರ ಸಜೀಬ್‌ ವಾಜಿದ್‌ ತಿಳಿಸಿದ್ದಾರೆ.

Advertisement

“ನನ್ನ ತಾಯಿ ಯಾವುದೇ ದೇಶದಲ್ಲಿ ಆಶ್ರಯ ಕೋರಿಲ್ಲ. ಹಾಗಾಗಿ ಬ್ರಿಟನ್‌ ಮತ್ತು ಅಮೆರಿಕದ ನಿರ್ಣಯಗಳ ಕುರಿತು ಹಬ್ಬಿರುವ ಸುದ್ದಿಯೂ ಸತ್ಯವಲ್ಲ. ಆಕೆ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂದುಕೊಳ್ಳುತ್ತಿದ್ದರು. ಇದೀಗ ನಿವೃತ್ತರಾಗಿದ್ದು, ಕುಟುಂಬದೊಂದಿಗೆ ಮುಂದಿನ ಜೀವನ ಕಳೆಯಲಿದ್ದಾರೆ’ ಎಂದು ಹೇಳಿದ್ದಾರೆ.

ಭಾರತ ನೆರವಾಗಲಿ: ಬಾಂಗ್ಲಾದೇಶದಲ್ಲಿ ಸಂಸತ್ತು, ದೇಗುಲಗಳ ಮೇಲೆ ದಾಳಿ ನಡೆಸಲಾಗಿದೆ. ನಮ್ಮ ಪಕ್ಷದ ಸಂಸದರ ನಿವಾಸಗಳಿಗೆ ಬೆಂಕಿ ಹಚ್ಚಲಾಗಿದೆ. ಅದು ಪಾಕಿಸ್ತಾನವನ್ನೂ ಮೀರಿ ಮತ್ತೂಂದು ಸಿರಿಯಾದಂತಾಗುತ್ತಿದೆ ಎಂದಿದ್ದಾರೆ ವಾಜಿದ್‌.

ಇದನ್ನೂ ಓದಿ: Bangladesh: ನಮಗೆ ಪ್ರತೀಕಾರ ಮುಖ್ಯ ಅಲ್ಲ… ಬಿಎನ್‌ಪಿ ಮುಖ್ಯಸ್ಥೆ ಖಾಲಿದಾ ಜಿಯಾ

Advertisement

Udayavani is now on Telegram. Click here to join our channel and stay updated with the latest news.

Next