Advertisement

Bangladesh: ನಮಗೆ ಬೇಕು ಭಾರತದ ಅಭಿವೃದ್ಧಿ ಯೋಜನೆ: ಬಾಂಗ್ಲಾದೇಶ ಸರ್ಕಾರ

11:29 PM Sep 10, 2024 | Team Udayavani |

ಢಾಕಾ: ಭಾರತ ಸರ್ಕಾರ ನಮ್ಮ ದೇಶದಲ್ಲಿ ಕೈಗೊಂ­ಡಿರುವ ಅಭಿವೃದ್ಧಿ ಯೋಜನೆಗಳು ಮುಂದುವರಿ­ಯಲಿವೆ. ಅವುಗಳ ಮಹತ್ವವನ್ನು ಗಮನಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿತ್ತ ಸಲಹೆಗಾರ ಸಲೇಹು­ದ್ದೀನ್‌ ಅಹ್ಮದ್‌ ಹೇಳಿದ್ದಾರೆ.

Advertisement

ಹೂಡಿಕೆ ಮತ್ತು ಆರ್ಥಿಕ ಸಹಕಾರಕ್ಕೆ ಬಾಂಗ್ಲಾ ಸೂಕ್ತ ತಾಣವಾಗಿದೆ ಭಾರತಕ್ಕೆ ತಿಳಿಸಿದ್ದೇವೆ ಎಂದಿದ್ದಾರೆ. ಒಟ್ಟು 3 ಸಾಲ ಯೋಜನೆ­ಗಳನ್ನು ಚರ್ಚಿಸಲಾಗಿದೆ ಎಂದರು.

ಇತ್ತೀಚೆಗಷ್ಟೆ ಭಾರತದಲ್ಲಿ ಇರುವ ಮಾಜಿ ಪ್ರಧಾನಿ ಶೇಖ್‌ ಹಸೀನಾರನ್ನು ವಾಪಸ್‌ ಕರೆಯಿಸಿಕೊಂಡು ಹಿಂಸಾ ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ಸರ್ಕಾರ ಪ್ರಕಟಿಸಿರುವಂತೆಯೇ ಭಾರತದ ಜತೆಗೆ ಸಹಭಾಗಿತ್ವ ಮುಂದುವರಿಸುವ ಬಗ್ಗೆ ಮೊಹಮ್ಮದ್‌ ಯೂನುಸ್‌ ನೇತೃತ್ವದ ಸರ್ಕಾರ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next