Advertisement

ಸುಂಟರ ಗಾಳಿಗೆ ಹಾರಿದ ಶೀಟ್‌ಗಳು

07:13 AM Mar 01, 2019 | |

ದೇವನಹಳ್ಳಿ: ಸುಂಟರ ಗಾಳಿಯ ರಭಸಕ್ಕೆ ರೇಷ್ಮೆ ಹುಳು ಸಾಕಾಣಿಕೆ ಹೊಸದಾಗಿ ನಿರ್ಮಿಸಿದ್ಧ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ್ಧ ಶೀಟ್‌ ಗಳು ಗಾಳಿಗೆ ಹಾರಿದ ಘಟನೆ ತಾಲೂಕಿನ ಮೀಸಗಾನ ಹಳ್ಳಿಯಲ್ಲಿ ನಡೆದಿದೆ.

Advertisement

ಮೀಸಗಾನ ಹಳ್ಳಿ ಸರ್ವೆ ನಂಬರರ್‌ನಲ್ಲಿರುವ ಕೊಯಿರಾ ಗ್ರಾಮದ ನಿವಾಸಿ ಚಿಕ್ಕೇಗೌಡ ಅವರ ಜಮೀನಿನಲ್ಲಿ  ರೇಷ್ಮೆ ಹುಳು ಸಾಕಾಣಿಕೆಗಾಗಿ ನಿರ್ಮಿಸಿದ್ದ ಹೊಸ ಕಟ್ಟಡ ಚಾವಣಿಯಲ್ಲಿ ಅಳವಡಿಸಿದ ಶೀಟ್‌ ಗಳು ಗಾಳಿಗೆ ಹಾರಿ ಹೋಗಿರುವುದರಿಂದ ಲಕ್ಷಾಂತರ ರೂ ನಷ್ಟವಾಗಿದೆ. 

ರೈತ ಚಿಕ್ಕೇ ಗೌಡ ಮಾತನಾಡಿ ರೈತರು ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿಯಲ್ಲಿ  ಸಾಕಷ್ಟು ಸಮಸ್ಯೆ ಗಳಿಗೆ ಸಿಲುಕಿದ್ದಾರೆ. ಆ ಸಮಸ್ಯೆ ಯ ಜೊತೆಯಲ್ಲಿ ಇದೀಗ ಪ್ರಕೃತಿ ವಿಕೋಪಕ್ಕೆ ರೈತ ತತ್ತರಿಸಿ ಹೋಗಿದ್ದು ವ್ಯವಸಾಯ ಸಾಕಾಗಿ ಹೋಗುವಂತೆ ಆಗಿದೆ. ಸುಂಟರ ಗಾಳಿಯ ರಭಸಕ್ಕೆ ಮೇಲ್ಚಾವಣಿ ಸಿಮೆಂಟ್‌ ಶೀಟ್‌ ಗಳು ಹಾರಿ ಹೋಗಿದೆ.

ಅಂರ್ತಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆಯ ಒಂದಾದರೆ ಮತ್ತೂಂದು ಸಮಸ್ಯೆ ಗಣಿ ಧೂಳು ಹೆಚ್ಚಾಗುತ್ತಿದೆ. ರೈತ ಯಾವ ರೀತಿ ಬೆಳೆಗಳನ್ನು ಬೆಳೆದು ಬದುಕಬೇಕು. ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಪರಿಹಾರ ಒದಗಿಸಬೇಕು. ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಳಲನ್ನು ತೋಡಿಕೊಂಡರು.   

Advertisement

Udayavani is now on Telegram. Click here to join our channel and stay updated with the latest news.

Next