Advertisement

Loksabha; ತರೂರ್ ಅವರಿಗೆ ಮಹಿಳೆಯರ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ!

05:05 PM Sep 21, 2023 | Team Udayavani |

ಹೊಸದಿಲ್ಲಿ: ಲೋಕಸಭಾ ಕಲಾಪದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಚಂದ್ರಯಾನ 3 ಯಶಸ್ಸನ್ನು ಉಲ್ಲೇಖಿಸಿ ಮಹಿಳಾ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಯಾವುದೇ ಮಹಿಳಾ ಮೀಸಲಾತಿಯ ಅಗತ್ಯ ಕಂಡು ಬರುವುದಿಲ್ಲ’ಎಂದು ಹೇಳಿದರು.

Advertisement

ತರೂರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವೆ ಅನುಪ್ರಿಯಾ ಪಟೇಲ್ ‘ಹಿರಿಯ ನಾಯಕರಾದ ನೀವು ಲೋಕಸಭೆ ಮಹತ್ವದ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದ ಬಳಿಕ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಜೀತೆಂದ್ರ ಸಿಂಗ್ ‘ಶಶಿ ತರೂರ್ ಅವರಿಗೆ ಮಹಿಳೆಯರ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ!’ ಎಂದರು.

ಸಚಿವರ ಹೇಳಿಕೆ ಬಳಿಕ ತರೂರ್ ಸಹಿತ ಕಲಾಪದಲ್ಲಿದ್ದವರೆಲ್ಲರೂ ನಗೆಗಡಲಲ್ಲಿ ತೇಲಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next