Advertisement

ಜನಾರ್ದನ ರೆಡ್ಡಿ ಪ್ರಕೃತಿ ಸಂಪತ್ತಿನ ಲೂಟಿಗಾಗಿ ಜನಾಧಿಕಾರ ಬಳಸಿಕೊಂಡಿದ್ದಾರೆ: ಶರಣಪ್ಪ ಸಜ್ಜಿಹೊಲ

04:22 PM Dec 26, 2022 | Team Udayavani |

ಗಂಗಾವತಿ: ಬಳ್ಳಾರಿಯ ಜನತೆ ನೀಡಿದ್ದ ಅಧಿಕಾರವನ್ನು ಅಲ್ಲಿಯ ಸಂಪನ್ಮೂಲವನ್ನೆಲ್ಲ ಲೂಟಿ ಮಾಡಲು ಬಳಸಿಕೊಂಡಿರುವ ಜನಾರ್ದನ ರೆಡ್ಡಿಯವರು ಕೆ ಆರ್ ಪಿಪಿ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ 2023ರ ವಿಧಾನಸಭಾ ಚುನಾವಣೆಗೆ ಗಂಗಾವತಿಯಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲೆಯ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಗಂಗಾವತಿ ತಾಲೂಕ ಅಧ್ಯಕ್ಷರು ಮತ್ತು ನ್ಯಾಯವಾದಿ ಶರಣಪ್ಪ ಸಜ್ಜಿಹೊಲ ಹೇಳಿದ್ದಾರೆ.

Advertisement

ಗಂಗಾವತಿಯ ಮತದಾರರು ರಡ್ಡಿಯ ಈ ಸಂಪನ್ಮೂಲ ಲೂಟಿಯ ದುರುದ್ದೇಶವನ್ನು ಅರಿಯದಷ್ಟು ಮೂರ್ಖರೇನಲ್ಲ. ರೆಡ್ಡಿಯ ನಂಬಿಕೆ ಗಂಗಾವತಿಯಲ್ಲಿ ಸಂಪೂರ್ಣ ಹುಸಿಯಾಗಲಿದೆ. ಚಿನ್ನದ ಲಂಕೆಯ ಅಧಿಪತಿಯನ್ನೇ ಧೂಳಿಪಟ ಮಾಡಿದ  ಗಂಗಾವತಿಯ ಪ್ರತಿಯೊಬ್ಬ ಮತದಾರನೂ ಕೊಪ್ಪಳ ಸಂಪನ್ಮೂಲ ರಕ್ಷಣೆಗಾಗಿ ಕಂಕಣ ಬದ್ಧನಾಗಿ ನಿಲ್ಲಲಿದ್ದಾನೆ ಎಂದು ಆಮ್ ಆದ್ಮಿ ಪಾರ್ಟಿಯ ಗಂಗಾವತಿ ತಾಲೂಕ ಅಧ್ಯಕ್ಷರು ಮತ್ತು ನ್ಯಾಯವಾದಿ ಶರಣಪ್ಪ ಸಜ್ಜಿಹೊಲ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next