Advertisement

ಜೆಡಿಯು 2 ಹೋಳಾಗಿದೆ ಎಂದ ಶರದ್‌ ಯಾದವ್‌

06:55 AM Aug 11, 2017 | Team Udayavani |

ಪಟ್ನಾ: ಬಿಹಾರದಲ್ಲಿನ ಮಹಾಘಟಬಂಧನ್‌ ಒಡೆದ ಬಳಿಕ ಸಿಎಂ ನಿತೀಶ್‌ ಕುಮಾರ್‌ ವಿರುದ್ಧ ತೀವ್ರ ಅಸಮಾಧಾನ ಗೊಂಡಿರುವ ಪಕ್ಷದ ನಾಯಕ ಶರದ್‌ ಯಾದವ್‌ ಅವರು ಇದೀಗ ನಿತೀಶ್‌ರಿಂದ ದೂರವಾಗುವ ಸುಳಿವು ನೀಡಿದ್ದಾರೆ.

Advertisement

ಗುರುವಾರ ಸೋನೆಪುರ್‌ನಲ್ಲಿ ಬಹುಜನ್‌ ಚೌಪಾಲ್‌ ಯಾತ್ರೆಯಲ್ಲಿ ಪಾಲ್ಗೊಂಡು ನಿತೀಶ್‌ ವಿರುದ್ಧ ತೀಕ್ಷ್ಣ ವಾಗಿಯೇ ವಾಗ್ಧಾಳಿ ನಡೆಸಿದ್ದಾರೆ. “ಸರಕಾರಿ ಜನತಾದಳದ ಜನ ಈಗ ಮುಖ್ಯಮಂತ್ರಿ, ಸಚಿವರಾಗಿದ್ದಾರೆ. ಆದರೆ, ನೈಜ ಜನತಾದಳದ ವ್ಯಕ್ತಿಗಳು ಜನಸಾಮಾನ್ಯರಲ್ಲಿದ್ದಾರೆ’ ಎನ್ನುವ ಮೂಲಕ ಶರದ್‌ ಅವರು ಜೆಡಿಯು 2 ಭಾಗವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಜತೆಗೆ, ಮಹಾಘಟ ಬಂಧನ್‌ ಅನ್ನು ಮುರಿಯುವ ಮೂಲಕ ನಿತೀಶ್‌ ಅವರು ರಾಜ್ಯದ 11 ಕೋಟಿ ಮಂದಿಯ ನಂಬಿಕೆಗೆ ದ್ರೋಹ ಬಗೆದಿ ದ್ದಾರೆ ಎಂದೂ ಹೇಳಿದ್ದಾರೆ. 

ಶರದ್‌ ಅವರು ರಾಜ್ಯಾದ್ಯಂತ ಪ್ರವಾಸ ಬೆಳೆಸಿ, ಆರ್‌ಜೆಡಿ-ಜೆಡಿಯು ಮೈತ್ರಿ ಕಡಿತ ಮತ್ತು ಹೊಸ ಸರಕಾರದ ಕುರಿತು ಜನರ ಅಭಿಪ್ರಾಯ ಪಡೆಯಲಿ ದ್ದಾರೆ. ಇದೇ ವೇಳೆ, ಶರದ್‌ಗೆ ಪ್ರತಿಕ್ರಿಯಿಸಿರುವ ಜೆಡಿಯು, ಮಿತಿಮೀರಿ ವರ್ತಿಸಬೇಡಿ ಎಂದು ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next