Advertisement

ಶಂಕರನ ನೆನಪಿನ ಅಂಗಳ

08:26 PM Nov 01, 2019 | Lakshmi GovindaRaju |

ಶಂಕರನ ನೆನಪಲ್ಲಿ…: ಕನ್ನಡದ ಮೇರು ನಟ ಶಂಕರ್‌ ನಾಗ್‌ ಅವರ ಸ್ಮರಣಾರ್ಥ ಪತ್ನಿ ಅರುಂಧತಿ ನಾಗ್‌ ಸ್ಥಾಪಿಸಿದ ಸಂಸ್ಥೆ ಇದು. ರಂಗಪ್ರಿಯರಿಗೆ ಕೈಗೆಟಕುವ ದರದಲ್ಲಿ ರಂಗಮಂದಿರವನ್ನು ನಿರ್ಮಿಸುವುದು ಶಂಕರ್‌ ನಾಗ್‌ರ ಕನಸಾಗಿತ್ತು. ಅದರ ಸಾಕಾರ ರೂಪವೇ ಈ ರಂಗಶಂಕರ.

Advertisement

ದಾನಿಗಳ ನೆರವು: 1990ರಲ್ಲಿ ಶಂಕರ್‌ ನಾಗ್‌ರ ಅಕಾಲಿಕ ಮರಣದ ನಂತರ, ಸಂಕೇತ್‌ ಟ್ರಸ್ಟ್‌ ವತಿಯಿಂದ ಶಂಕರ್‌ ಸ್ಮರಣಾರ್ಥ ರಂಗಮಂದಿರ ನಿರ್ಮಿಸಲು ಯೋಚಿಸಲಾಯ್ತು. 1994ರಲ್ಲಿ ಸರ್ಕಾರದಿಂದ ಭೂಮಿಯೂ ಸಿಕ್ಕಿತು. ಆದರೆ, ನಿಧಿಯ ಕೊರತೆಯಿಂದಾಗಿ ನಿರ್ಮಾಣ ಕೆಲಸ 2001ರವರೆಗೆ ಶುರುವಾಗಲಿಲ್ಲ. ನಂತರ, ರಂಗಭೂಮಿ ಕಲಾವಿದರು, ರಂಗಪ್ರೇಮಿಗಳು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಂಗಶಂಕರ ತಲೆ ಎತ್ತಿ ನಿಂತಿತು.

ವೈಶಿಷ್ಟಗಳು: 1750 ಚದರ ಅಡಿಯ ವೇದಿಕೆ, 4 ಗ್ರೀನ್‌ ರೂಮ್ಸ್‌, ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಎ.ಸಿ., ವಿಶೇಷಚೇತನ ಪ್ರೇಕ್ಷಕರಿಗಾಗಿ ವೀಲ್‌ಚೇರ್‌ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಎಲಿವೇಟರ್‌ ಇಲ್ಲಿದೆ. ರಂಗಶಂಕರದ ಆವರಣದಲ್ಲಿಯೇ ಪುಸ್ತಕದ ಅಂಗಡಿ, ರುಚಿರುಚಿ ಖಾದ್ಯಗಳನ್ನು ಉಣಬಡಿಸುವ ಕೆಫೆ ಕೂಡಾ ಇದೆ.

ಆಸನ ಸಾಮರ್ಥ್ಯ: 320

ಎಲ್ಲಿದೆ?: ಜೆ.ಪಿ. ನಗರ 2ನೇ ಹಂತ

Advertisement

ಉದ್ಘಾಟನೆ: ಅಕ್ಟೋಬರ್‌ 28, 2004

ನಿರ್ಮಾಣ ಅವಧಿ: 3 ವರ್ಷ (2001-04)

ವಿನ್ಯಾಸ: ವಾಸ್ತುಶಿಲ್ಪಿ ಶಾರುಖ್‌ ಮಿಸ್ತ್ರಿ ಅವರ ಯೋಜನೆಯಂತೆ ನಿರ್ಮಾಣವಾದ ಕಟ್ಟಡ.

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ಅಂಥ ಪಾರಂಪರಿಕ ಕಟ್ಟಡಗಳ ಮಾಹಿತಿ ವಿಶೇಷ ಈ ಪಾಕ್ಷಿಕ ಅಂಕಣದ ಅಂತರಾಳ)

ರಂಗೋತ್ಸವ
ಬಹು ನಿರೀಕ್ಷಿತ ರಂಗ ಶಂಕರ ರಂಗೋತ್ಸವವು ಈ ಬಾರಿ ನ. 5-10ರವರೆಗೆ ನಡೆಯಲಿದೆ. ದೇಶದ ವಿವಿಧ ಭಾಗಗಳ ಉತ್ಸಾಹಿ ರಂಗ ತಂಡಗಳು ಭಾಗವಹಿಸುತ್ತಿವೆ. ನಾಟಕದ ಟಿಕೆಟ್‌ಗಳು ರಂಗ ಶಂಕರ ಬಾಕ್ಸ್‌ಆಫೀಸ್‌ ಮತ್ತು ಬುಕ್‌ಮೈಶೋನಲ್ಲಿ ಲಭ್ಯ.

ಪ್ರದರ್ಶನಗೊಳ್ಳುವ ನಾಟಕಗಳು
ನವೆಂಬರ್‌ 5
ನಾಟಕ: ನವ
ಭಾಷೆ: ಕನ್ನಡ
ಕಥಾವಸ್ತು: ಒಂಬತ್ತು ಮಂಗಳಮುಖೀಯರ ಕಥೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು

ನವೆಂಬರ್‌ 6
ನಾಟಕ: ರಿಹ್ಲಾ
ಭಾಷೆ: ಹಿಂದೂಸ್ಥಾನಿ
ಕಥಾವಸ್ತು: ನೂತನ ದೇಶಕ್ಕಾಗಿ ಹಾತೊರೆಯುವ ಯುವ ಜನತೆಯ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನವೆಂಬರ್‌ 7
ನಾಟಕ: ಹೆಲೊ ಫ‌ರ್ಮಾಯಿಶ್‌
ಭಾಷೆ: ಹಿಂದಿ
ಕಥಾವಸ್ತು: ಉದ್ಯಮಶೀಲ ಹರಿಯಾಣದ ಮಹಿಳೆಯರು ಅಂತರಿಕ್ಷಕ್ಕೆ ಹೋಗುವ ಕಥೆ.
ವಯೋಮಿತಿ: 10 ವರ್ಷ ಮೇಲ್ಪಟ್ಟವರು

ನವೆಂಬರ್‌ 8
ನಾಟಕ: ಸಂಗೀತ್‌ ಬಾರಿ
ಭಾಷೆ: ಹಿಂದಿ/ ಮರಾಠಿ
ಕಥಾವಸ್ತು: ಲಾವಣಿ ನೃತ್ಯದ ಮೂಲ ಕಥಾ ಹಂದರವಿದೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು.

ನವೆಂಬರ್‌ 9
ನಾಟಕ: ದಿ ಹಂಗರ್‌ ಆರ್ಟಿಸ್ಟ್‌
ಭಾಷೆ: ಮರಾಠಿ, ಇಂಗ್ಲಿಷ್‌, ಹಿಂದಿ
ಕಥಾಹಂದರ: ಉಪವಾಸದಿಂದ ಬದುಕು ಸಾಗಿಸುವನ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನವೆಂಬರ್‌ 10
ನಾಟಕ: ಈದ್ಗಾ ಕೆ ಜಿನ್ನತ್‌
ಭಾಷೆ: ಹಿಂದಿ, ಉರ್ದು
ಕಥಾವಸ್ತು: ಇಸ್ಲಾಮಿಕ್‌ ಕಥಾ ಹಂದರ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನಾಟಕದ ಸಮಯ: ನ. 5-9, ಸಂಜೆ 7.30
ಎಲ್ಲಿ?: ರಂಗಶಂಕರ
ಟಿಕೆಟ್‌ ದರ: 200 ರೂ.

Advertisement

Udayavani is now on Telegram. Click here to join our channel and stay updated with the latest news.

Next