Advertisement

Mumbai: ಶಂಕರಾಚಾರ್ಯರು ಆಶೀರ್ವದಿಸಬೇಕೇ ವಿನಾ ಟೀಕಿಸಬಾರದು: ಕೇಂದ್ರ ಸಚಿವ ನಾರಾಯಣ ರಾಣೆ

12:10 AM Jan 15, 2024 | Team Udayavani |

ಮುಂಬೈ: ಶಂಕರಾಚಾರ್ಯರು ರಾಮಮಂದಿರದ ಬಗ್ಗೆ ಟೀಕಿಸುವುದು ಸಲ್ಲ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಮಂದಿರ ಪೂರ್ಣವಾಗಿ ನಿರ್ಮಾಣವಾಗುವುದಕ್ಕೂ ಮುನ್ನ ಪ್ರಾಣಪ್ರತಿಷ್ಠೆ ನಡೆಸುತ್ತಿರುವುದು ಸರಿಯಲ್ಲ ಎಂಬ ಉತ್ತರಾಖಂಡದ ಜ್ಯೋತಿರ್‌ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಸಚಿವ ರಾಣೆ, “ಯಾರೂ ಮಾಡದ್ದನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಅವರನ್ನು ಟೀಕಿಸುತ್ತಿದ್ದಾರೆ ಎಂದರೆ ಅವಿಮುಕ್ತೇಶ್ವರಾನಂ ದರು ಮೋದಿ, ಬಿಜೆಪಿಯನ್ನು ರಾಜಕೀಯವಾಗಿ ನೋಡುತ್ತಿದ್ದಾರೆ ಎಂದರ್ಥ’ ಎಂದಿದ್ದಾರೆ.

Advertisement

ರಾಣೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ಉದ್ಧವ್‌ ಬಣ, ಶಂಕರಾಚಾರ್ಯರ ಬಳಿ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next