Advertisement

ವಾರಿಯರ್ಸ್ ಗೆ ಹೋಮಿಯೋಪಥಿ ಮಾತ್ರೆ

03:55 PM May 25, 2020 | Naveen |

ಶಹಾಬಾದ: ತಾಲೂಕಿನ ಕ್ವಾರಂಟೈನ್‌ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್ ಹಾಗೂ ವಲಸೆ ಕಾರ್ಮಿಕರಿಗೆ ವಿತರಿಸಲು ರೇಷ್ಮಾ ಮಹಿಳಾ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ಡಾ| ಮಲಕರೆಡ್ಡಿ ಹೋಮಿಯೋಪಥಿಕ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿಕ್‌ ಮಾತ್ರೆಗಳನ್ನು ತಹಶೀಲ್ದಾರ್‌ ಸುರೇಶ ವರ್ಮಾ ಅವರಿಗೆ ಒಪ್ಪಿಸಲಾಯಿತು.

Advertisement

ಕೋವಿಡ್ ವೈರಸ್‌ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ, ಅಂಗನವಾಡಿ, ಪಂಚಾಯತಿ ಸಿಬ್ಬಂದಿ, ನಗರಸಭೆ, ಆರೋಗ್ಯ ಮತ್ತು ಕಂದಾಯ ಇಲಾಖೆ ಹಾಗೂ ಇತರ ಇಲಾಖೆ ಸಿಬ್ಬಂದಿಗೆ ಹಾಗೂ ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಸುಮಾರು 15 ದಿನಗಳಿಗಳಾಗುವಷ್ಟು ಮಾತ್ರೆಗಳನ್ನು ನೀಡಲಾಯಿತು. ಅರ್‌ಸೆನಿಕ್‌ ಅಲ್ಬಮ್‌ 30 ಪೊಟೆನ್ಸಿ ಎನ್ನುವ ಈ ಮಾತ್ರೆ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೋವಿಡ್ ವೈರಸ್‌ ವಿರುದ್ಧ ಹೋರಾಟ ನಡೆಸುತ್ತದೆ. ಆದ್ದರಿಂದ ಈ ಮಾತ್ರೆಗಳನ್ನು ಕೋವಿಡ್ ವಾರಿಯರ್ಗೆ ಹಾಗೂ ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ನೀಡಿ ಎಂದು ವೈದ್ಯರು ತಿಳಿಸಿದರು.

ತಹಶೀಲ್ದಾರ್‌ ಸುರೇಶ ವರ್ಮಾ, ಕೋವಿಡ್‌ 19 ನೋಡಲ್‌ ಅಧಿಕಾರಿ ನೀಲಗಂಗಾ ಎಸ್‌. ಬಬಲಾದ, ಪೌರಾಯುಕ್ತ ವೆಂಕಟೇಶ, ನಗರಸಭೆ ಸದಸ್ಯೆ ಸಾಬೇರಾಬೇಗಂ, ರೇಷ್ಮಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ| ರೇಷ್ಮಾ, ಡಾ| ಮಲಕರೆಡ್ಡಿ ಹೋಮಿಯೋಪೆಥಿಕ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಪಿ. ಸಂಪತ್‌ರಾವ್‌, ಡಾ| ರಾಜೇಂದ್ರ ಪಾಟೀಲ, ಡಾ| ಅರವಿಂದ ಕಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next