Advertisement

ಏಳು ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

06:25 AM Mar 10, 2018 | Team Udayavani |

ನವದೆಹಲಿ: ದೇಶವನ್ನೇ ಅಲ್ಲಾಡಿಸಿದ ಪಿಎನ್‌ಬಿ ಸೇರಿದಂತೆ ಹಲವು ಬ್ಯಾಂಕುಗಳ ಹಗರಣ ಸಂಬಂಧ ಪರಾರಿಯಾದವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನೇ ತೆಗೆದುಕೊಂಡಿದ್ದು, 7,100 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಜಪ್ತಿ ಮಾಡಿ ಕೊಂಡಿದೆ.

Advertisement

ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಶಿವ್‌ ಪ್ರತಾಪ್‌ ಶುಕ್ಲಾ ಅವರು ಈ ಸಂಬಂಧ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ ಶೇ.1.66ಕ್ಕೆ ಏರಿಕೆಯಾಗಿದ್ದು, ಏಪ್ರಿಲ್‌ ಡಿಸೆಂಬರ್‌ ಅವಧಿಯಲ್ಲಿ 9063 ಸಾಲಗಾರರು ಸುಸ್ತಿದಾರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್‌ ನಿಂದ ಡಿಸೆಂಬರ್‌ ಅವಧಿಯಲ್ಲಿ ಇವರು ಮರುಪಾವತಿ ಮಾಡಬೇಕಿರುವ ಸಾಲ 1.10 ಲಕ್ಷ ಕೋಟಿ ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next