Advertisement

ಮದ್ಯದಂಗಡಿಗೆ ಸಮಯ ನಿಗದಿ ಮಾಡಿ

08:38 AM Dec 19, 2018 | |

ವಿಧಾನಸಭೆ: ಮದ್ಯದ ಅಂಗಡಿಗಳು ಬೆಳ್ಳಂಬೆಳಗ್ಗೆ ತೆರೆದಿರುತ್ತದೆ. ಇದರಿಂದ ರಾಜ್ಯದ ಆದಾಯ ಹೆಚ್ಚಬಹುದು. ಆದರೆ, ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಮದ್ಯದ ಅಂಗಡಿಗಳಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕೆಂದು ಬಿಜೆಪಿಯ ಸುರೇಶ್‌ ಕುಮಾರ್‌ ಒತ್ತಾಯಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಶಾಸಕ ಐಹೊಳೆ ಡಿ. ಮಹಾಲಿಂಗಪ್ಪ ಪ್ರಶ್ನೆ ಸಂಬಂಧ ಮಧ್ಯಪ್ರವೇಶಿಸಿದ ಸುರೇಶ್‌ ಕುಮಾರ್‌ ಮಾತನಾಡಿ, ಮದ್ಯದ ಅಂಗಡಿಗಳು ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗುತ್ತಿದೆ. ಇದು ಕೂಲಿ ಕಾರ್ಮಿಕರ ಬದುಕಿಗೆ ಇನ್ನಷ್ಟು ತೊಂದರೆ ತಂದೊಡ್ಡುತ್ತಿದೆ. ಹೀಗಾಗಿ ನಿರ್ದಿಷ್ಟ ಸಮಯಕ್ಕೆ ಮದ್ಯದ ಅಂಗಡಿ ತೆರೆಯುವಂತೆ ಮಾಡಬೇಕು ಎಂದು ಮನವಿ
ಮಾಡಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಭೂಮಿಯೇ ಕಾಣದಂತಾಗಿದ್ದು, ಬರೀ ಬಾಟಲಿಗಳೇ ಕಾಣುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಇದಕ್ಕೆ ಸ್ಪೀಕರ್‌ ಪ್ರತಿಕ್ರಿಯಿಸಿ. ಕೆಲವರಿಗೆ ಬೆಳಗ್ಗೆಯಿಂದಲೇ ಅಗತ್ಯವಿರುತ್ತದೆ. ನಿರ್ದಿಷ್ಟ ಸಮಯ ನಿಗದಿ ಮಾಡಿದರೆ ಅಂಥವರ ಗತಿ ಏನು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. ಈ ಮಧ್ಯೆ ಸಿ.ಟಿ.ರವಿ, ನಾನು ನಿಮ್ಮನ್ನು ಗುರುವಾಗಿ ಸ್ಪೀಕರಿಸಿದ್ದೇನೆ ಎಂದರು. ಆದರೆ, ಈ ಒಂದು ವಿಷಯ (ಲಿಕ್ಕರ್‌) ಹೊರತುಪಡಿಸಿ ಎಂದು ಮಾತು ಮುಗಿಸುವುದರೊಳಗೆ ಸ್ಪೀಕರ್‌ ಪ್ರತಿಕ್ರಿಯಿಸಿ, ನಾನು ನಿಮಗೆ ದೀಕ್ಷೆ ನೀಡಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

ಸ್ಪೀಕರ್‌ ಅಸಮಾಧಾನ
ಪ್ರಶ್ನೋತ್ತರ ಸಂದರ್ಭದಲ್ಲಿ ಬಿಜೆಪಿ ಶಾಸಕರು ಪದೇಪದೆ ಎದ್ದುನಿಲ್ಲುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌, ಪ್ರಶ್ನೋತ್ತರದ ಸಂದರ್ಭದಲ್ಲಿ ವಿಷಯ ಮಂಡನೆಗೆ ಅವಕಾಶ ಇರುವುದಿಲ್ಲ. ಪ್ರಶ್ನೆಗೆ ಉಪ ಪ್ರಶ್ನೆ ಮಾತ್ರ ಕೇಳಲು ಅವಕಾಶ ಇರುತ್ತದೆ. ಇದು ಹೊಸ ಶಾಸಕರಿಗೆ ತಿಳಿದಿಲ್ಲ. ಮನಸ್ಸಿಗೆ ಬಂದಂತೆ ಎದ್ದು ನಿಲ್ಲುವುದು ಸರಿಯಲ್ಲ. ಸದನದ ಹಿರಿಯ ಸದಸ್ಯರು ಕಿರಿಯರಿಗೆ ತರಬೇತಿ ನೀಡಬೇಕು. ಇಲ್ಲದಿದ್ದರೆ ನನ್ನ ಕೊಠಡಿಗೆ ಬನ್ನಿ. ನಾನೇ ತಿಳಿಸಿಕೊಡುತ್ತೇನೆ ಎಂದು ಕಿರಿಯ
ಶಾಸಕರಿಗೆ ಸೂಚ್ಯವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next