Advertisement

ದೇಶದ ಏಳಿಗೆಗೆ ದುಡಿಯುವುದೇ ದೇಶಸೇವೆ: ಕ್ಯಾ|ಕಾರ್ಣಿಕ್‌

08:00 AM Jul 27, 2017 | Team Udayavani |

ಮಂಗಳೂರು: ಸೇನೆಯಲ್ಲಿದ್ದುಕೊಂಡು ದೇಶಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆದರೆ ಭಾರತೀಯತೆಯನ್ನು ಪಾಲಿಸಿ, ದೇಶದ ಏಳಿಗೆಗಾಗಿ ದುಡಿಯುವುದೂ ದೇಶಸೇವೆ ಎನಿಸಿಕೊಳ್ಳುತ್ತದೆ ಎಂದು ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದರು. ಕಾರ್ಗಿಲ್‌ ವಿಜಯ ದಿವಸದ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಮತ್ತು ಲಯನ್ಸ್‌ ಜಿಲ್ಲೆ 317-ಡಿ ಸಹಯೋಗದಲ್ಲಿ ಬುಧವಾರ ನಗರದ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ನಡೆದ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕಾರ್ಗಿಲ್‌ ಹೋರಾಟದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವುದು ದೇಶವಾಸಿಗಳಾದ ಪ್ರತಿಯೊಬ್ಬರ ಕರ್ತವ್ಯ. ಸೈನಿಕರ ತ್ಯಾಗ, ಪರಿಶ್ರಮವನ್ನು ನೆನಪಿಸಿಕೊಂಡು ಗೌರವಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದವರು ಅಭಿಪ್ರಾಯಪಟ್ಟರು.

ಮೋಂಬತ್ತಿ ಬೆಳಗಿ, ಹೂ ಹಾಕಿ ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಲಾಯಿತು. ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ನವೀಕರಣದ ರೂವಾರಿ ವಿಜಯನಾಥ ವಿಠಲ ಶೆಟ್ಟಿ, ಸಂಘದ ಅಧ್ಯಕ್ಷ ವಿಕ್ರಮ್‌ ದತ್ತ, ಮುಖಂಡ ಕರ್ನಲ್‌ ನಿಟ್ಟೆಗುತ್ತು ಶರತ್‌ ಭಂಡಾರಿ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಐರನ್‌, ಖಜಾಂಚಿ ಕರ್ನಲ್‌ ಬಾಲಕೃಷ್ಣ, ಕ್ಯಾ| ದೀಪಕ್‌ ಅಡ್ಯಂತಾಯ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪೂಜಾ ಪೈ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next