Advertisement

ಸುರತ್ಕಲ್ ಹೊಸಬೆಟ್ಟು ಪರಿಸರದಲ್ಲಿ ಮನೆ, ದೈವಸ್ಥಾನಗಳಲ್ಲಿ ಸರಣಿ ಕಳ್ಳತನ

01:46 PM Jan 12, 2021 | Team Udayavani |

ಸುರತ್ಕಲ್: ಸುರತ್ಕಲ್ ಸಮೀಪದ ಹೊಸಬೆಟ್ಟು ಹೊಯಿಗೆ ದಿಡ್ಡು ಪರಿಸರದಲ್ಲಿ ಸರಣಿ ಕಳ್ಳತನದ ಘಟನೆ ನಡೆದಿದೆ.

Advertisement

ರವಿವಾರ ರಾತ್ರಿ ಇಲ್ಲಿನ ದೈವಸ್ಥಾನವೊಂದಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಕಡ್ಸಲೆ, ಬೆಳ್ಳಿ ಕೊಡೆ, ಕಾಣಿಕೆ ಡಬ್ಬಿಯ ಹಣವನ್ನು ಕದ್ದೊಯ್ದಿದ್ದಾರೆ.

ಸೋಮವಾರ ರಾತ್ರಿ ಮನೆಯ ದೈವಸ್ಥಾನಕ್ಕೆ ನುಗ್ಗಿ ದೈವದ ಕಡ್ಸಲೆ, ಬೆಳ್ಳಿ ಮೂರ್ತಿ, ಬೆಳ್ಳಿ ಕೊಡೆ, ಕದ್ದಿದ್ದಾರೆ.ಇದೇ ಜಾಗದಲ್ಲಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಬಂಗಾರದ ಸರ, ನಗದು ಕದ್ದಿದ್ದಾರೆ.

ಇದನ್ನೂ ಓದಿ:ಕೇಂದ್ರದ ಮೂರು ಕೃಷಿ ಕಾಯ್ದೆಗೆ ತಾತ್ಕಾಲಿಕ ತಡೆ , ಸಮಿತಿ ರಚನೆ: ಸುಪ್ರೀಂ ತೀರ್ಪು

ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಆಗಮಿಸಿ ಕಳ್ಳರ ಹೆಜ್ಜೆ ಗುರುತು ಪತ್ತೆ ಹಚ್ಚಲು ಪ್ರಯತ್ನ ನಡೆಸಿದ್ದಾರೆ. ಕಳೆದ ಬಾರಿ ದೇವಸ್ಥಾನ ಕ್ಕೆ ನುಗ್ಗಿ ಕಳ್ಳರ ಬಂಧನವಾಗಿದ್ದು ಇದೀಗ ಸುರತ್ಕಲ್ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದೆ. ಇದರಿಂದ ಜನರಲ್ಲಿ ಭೀತಿಯುಂಟಾಗಲು ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next