Advertisement

ಉಪ್ಲಾಡಿಯಲ್ಲಿ ಸರಣಿ ಅಪಘಾತ; ಬೈಕ್‌ ಸವಾರ ಮೃತ್ಯು

12:12 AM Dec 18, 2022 | Team Udayavani |

ಕೋಟ : ಬೈಕ್‌ಗಳೆರಡರ ನಡುವೆ ಅಪಘಾತ ಸಂಭವಿಸಿ, ಎದುರಿನಿಂದ ಬರುತ್ತಿದ್ದ ಕಾರಿನ ಚಕ್ರದಡಿ ಓರ್ವ ಬೈಕ್‌ ಸವಾರ ಸಿಲುಕಿ ಸಾವನ್ನಪ್ಪಿದ ಘಟನೆ ಬನ್ನಾಡಿ ಸಮೀಪ ಉಪ್ಲಾಡಿಯಲ್ಲಿ ಡಿ. 16ರಂದು ರಾತ್ರಿ ಸಂಭವಿಸಿದೆ.

Advertisement

ಗದಗ ನಿವಾಸಿ, ಪ್ರಸ್ತುತ ಅಲ್ತಾರಿನಲ್ಲಿ ಕಲ್ಲು ಕೋರೆ ಕಾರ್ಮಿಕನಾಗಿ ದುಡಿಯುತ್ತಿರುವ ಗಂಗಾಧರ ಪುಣೇಕರ್‌ (22) ಸಾವನ್ನಪ್ಪಿದ ಯುವಕ.

ಗಂಗಾಧರ ಅವರು ಕುಂದಾಪುರದಲ್ಲಿ ಕರಾಟೆ ತರಬೇತಿ ಮುಗಿಸಿ ಸಾೖಬ್ರಕಟ್ಟೆಯಲ್ಲಿರುವ ಮನೆ ಕಡೆ ತೆರಳುತ್ತಿರುವಾಗ ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಗಂಗಾಧರ್‌ ರಸ್ತೆಗೆ ಬಿದ್ದಿದ್ದಾನೆ. ಈ ಸಂದರ್ಭ ಎದುರುಗಡೆ ಬನ್ನಾಡಿಯಿಂದ ಕೋಟ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಮೈ ಮೇಲೆ ಹರಿದಿದ್ದು, ಅಪಘಾತದ ತೀವ್ರತೆಗೆ ಗಂಗಾಧರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಯುವಕ ತಂದೆ, ತಾಯಿಯನ್ನು ಅಗಲಿದ್ದಾನೆ.

ದೂರು-ಪ್ರತಿದೂರು
ಅಪಘಾತಕ್ಕೆ ಬೈಕ್‌ ಸವಾರನ ನಿರ್ಲಕ್ಷ್ಯ ಕಾರಣ ಎಂದು ಕಾರು ಚಾಲಕ ದೂರು ನೀಡಿದ್ದಾನೆ. ಬೈಕ್‌ ಸವಾರ ಹಾಗೂ ಕಾರು ಚಾಲಕನ ನಿರ್ಲಕ್ಷéವೇ ಕಾರಣ ಎನ್ನುವುದಾಗಿ ಗಂಗಾಧರ ಅವರ ಸಹೋದರ ಪ್ರತಿದೂರು ದಾಖಲಿಸಿದ್ದಾನೆ. ಕೋಟ ಠಾಣಾಧಿಕಾರಿ ಮಧು ಬಿ. ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ : ಮೂಲ್ಕಿ: ಬಾಲಕಿಯೊಂದಿಗೆ ಅಸಭ್ಯ ವರ್ತನೆ; ಯುವಕನನ್ನು ಕಟ್ಟಿ ಹಾಕಿ ಹಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next