Advertisement

Bannerghatta: ಪ್ರಾಣಿಗಳ ಸರಣಿ ಸಾವು: ಬನ್ನೇರುಘಟ್ಟ ಜೈವಿಕ ಪಾರ್ಕ್‌ಗೆ ಸಚಿವರ ಭೇಟಿ

11:39 PM Sep 21, 2023 | Team Udayavani |

ಆನೇಕಲ್‌(ಬೆಂಗಳೂರು ಗ್ರಾಮಾಂತರ): ಪ್ರಾಣಿಗಳ ಸರಣಿ ಸಾವು ಹಿನ್ನೆಲೆಯಲ್ಲಿ ಗುರುವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದರು.

Advertisement

ಉದ್ಯಾನವನದಲ್ಲಿ 15 ದಿನಗಳ ಹಿಂದೆ ಸೋಂಕಿಗೊಳಗಾಗಿ ಏಳು ಚಿರತೆಗಳು ಸಾವನ್ನಪ್ಪಿವೆ. ವೈರಸ್‌ ರಾಜ್ಯದ ಇನ್ನಿತರ ವನ್ಯಜೀವಿಗಳ ಮೇಲೆ ಪ್ರಭಾವ ಬೀರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸತತ 3 ಗಂಟೆಗಳ ಕಾಲ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಅಗತ್ಯ ಮಾಹಿತಿ ಪಡೆದರು. ಚಿರತೆ ಹಾಗೂ ಜಿಂಕೆಗಳ ಸರಣಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next