Advertisement

Kaveri river: ಪ್ರತ್ಯೇಕ 3 ಪ್ರಕರಣ: ಕಾವೇರಿ ನದಿಯಲ್ಲಿ ಮುಳುಗಿ ನಾಲ್ವರ ಸಾವು

09:02 PM Apr 08, 2023 | Team Udayavani |

ಶ್ರೀರಂಗಪಟ್ಟಣ: ಪ್ರತ್ಯೇಕ ಪ್ರಕರಣಗಳಲ್ಲಿ ಯುವಕ ಸೇರಿ ನಾಲ್ವರು ಕಾವೇರಿ ನದಿಯಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ತಾಲೂಕಿನ ಬಲಮುರಿ, ಮಹದೇವಪುರ ಹಾಗೂ ರಾಜಪರಮೇಶ್ವರಿ ನಾಲೆಯಲ್ಲಿ ನಡೆದಿದೆ.

Advertisement

ಮೈಸೂರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನಗರದ ಧನಂಜಯ (23), ವಾಜಮಂಗಲ ಗ್ರಾಮದ ಖಾಸಗಿ ಬ್ಯಾಂಕ್‌ ಉದ್ಯೋಗಿ ಪ್ರಸನ್ನ (31) ಮೃತರು.
ಅಣ್ಣನ ಮುದುವೆ ಸಂಬಂಧ ಕುಟುಂಬ ಸಮೇತರಾಗಿ ಬಲಮುರಿ ದೇವಾಲಯದ ಮೆಟ್ಟಿಲ ಬಳಿ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಧನಂಜಯ ನದಿಯಲ್ಲಿ ಮುಳುಗುತ್ತಿದ್ದ. ಈ ವೇಳೆ ಸಂಬಂಧಿ ಪ್ರಸನ್ನ ರಕ್ಷಿಸಲು ನದಿಗೆ ಹಾರಿ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆ.ಆರ್‌. ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಯಲ್ಲಿ ಜಾರಿ ಬಿದ್ದು ಸಾವು
ಶ್ರೀರಂಗಪಟ್ಟಣ ತಾಲೂಕಿನ ತರಿಪುರ ಗ್ರಾಮದ ಗೋವಿಂದಾಚಾರ್‌ ಎಂಬವರ ಪುತ್ರ ಬಾಲು (16) ಮಹದೇವಪುರ ಗ್ರಾಮದ ಬಳಿಯ ರಾಜಪರಮೇಶ್ವರಿ ನಾಲೆಯಲ್ಲಿ ಕಾಲು ಜಾರಿಬಿದ್ದು ಮೃತಪಟ್ಟಿದ್ದಾನೆ. ಈತ ತನ್ನ ಸಂಬಂಧಿಕರೊಡನೆ ನಾಲೆಯಲ್ಲಿ ಕಾಲು ಜಾರಿ ಬಿದ್ದು ಈ ಘಟನೆ ಸಂಭವಿಸಿದೆ.

ಬೋರೇದೇವರ ದೇವಾಲಯದ ಬಳಿ
ಬೆಂಗಳೂರು ನಿವಾಸಿ ಪ್ರಭಾಕರ್‌ (54) ಎಂಬವರು ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದ ಕಾವೇರಿ ಬೋರೆದೇವರ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಎರಡು ಪ್ರಕರಣಗಳು ಅರೆಕರೆ ಠಾಣೆಯಲ್ಲಿ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next