Advertisement
ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಮಂತ ಹಳ್ಳಿ ಅವರಿಗೆ ಮುಂಜಾನೆ ರಾಜಿನಾಮೆ ಪತ್ರ ಸಲ್ಲಿಸಿದ ಬಿಜೆಪಿ ಹಿರಿಯ ಸದಸ್ಯ ಶೇಖರ ಅಂಗಡಿಯವರು ರವಿವಾರ ಸಂಜೆ ಜಿಎಲ್ಬಿಸಿ ಅತಿಥಿ ಗೃಹದಲ್ಲಿ ವಾರ್ಡಿನ ಮತದಾರರು, ಕಾರ್ಯಕರ್ತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಖಚಿತಪಡಿಸಿದರು.
Related Articles
Advertisement
ಭಾರತೀಯ ಜನತಾ ಪಕ್ಷವು ಕೋಟ್ಯಂತರ ಜನರು ರಕ್ತ, ಬೆವರು ಸುರಿಸಿ ಕಟ್ಟಿದ ಪಕ್ಷವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಿಜೆಪಿ ಪಕ್ಷವು ಇಂದು ವಿಶ್ವದಲ್ಲೇ ಬಲಿಷ್ಠ ಮತ್ತು ಬಹುದೊಡ್ಡ ರಾಷ್ಟೀಯ ಪಕ್ಷವಾಗಿದೆ. ಪಕ್ಷವು ನಮಗೆ ಅನಿವಾರ್ಯವೇ ಹೊರತು ಪಕ್ಷಕ್ಕೆ ನಾವು ಅನಿವಾರ್ಯವಲ್ಲ. ಆದಾಗ್ಯೂ ಕೆಲವು ಸ್ವಾರ್ಥಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ರಾಜೀನಾಮೆ ನಾಟಕದಂತಹ ಗಿಮಿಕ್ಗಳಲ್ಲಿ ತೊಡಗಿರುತ್ತಾರೆ. ಪಕ್ಷದ ಶಿಸ್ತು ಸಮಿತಿಯು ಇದನ್ನೆಲ್ಲ ಗಮನಿಸುತ್ತಿರುತ್ತದೆ. ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಇಂಥವರ ವಿರುದ್ಧ ಪಕ್ಷವು ಸೂಕ್ತಕ್ರಮವನ್ನು ಕೈಗೊಳ್ಳಲಿದೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಮಂತ ಹಳ್ಳಿ ಹೇಳಿದ್ದಾರೆ.