Advertisement

ಮತ್ತೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಅವಘಡ: ಗೂಳಿಗೆ ಢಿಕ್ಕಿ ಹೊಡೆದು ರೈಲಿನ ಮುಂಭಾಗ ಜಖಂ

03:02 PM Oct 29, 2022 | Team Udayavani |

ನವದೆಹಲಿ : ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ರೈಲಿಗೆ ಮತ್ತೆ ವಿಘ್ನ ಎದುರಾಗಿದೆ, ಶನಿವಾರ ಬೆಳಗ್ಗೆ ಗಾಂಧಿನಗರ ಮತ್ತು ಮುಂಬೈ ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈಸ್ಪೀಡ್ ರೈಲು ಅಪಘಾತಕ್ಕೀಡಾಗಿದೆ.

Advertisement

ಗುಜರಾತ್‌ನಲ್ಲಿ ಗೂಳಿಗೆ ಡಿಕ್ಕಿ ಹೊಡೆದಾಗ ರೈಲಿನ ಮೂಗು (ಮೂಗಿನ ಕೋನ್ ಕವರ್) ಮುರಿದಿದೆ. ರೈಲು ಸಂಚಾರ ಆರಂಭವಾದಾಗಿನಿಂದ ಒಂದೇ ತಿಂಗಳಲ್ಲಿ ಇದು ಮೂರನೇ ಅಪಘಾತವಾಗಿದೆ.

ಗೂಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಕೋಚ್‌ನ ಮೂಗಿನ ಕೋನ್ ಕವರ್ ಮುರಿದಿದೆ. ಇದರಿಂದಾಗಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ವರದಿಗಳ ಪ್ರಕಾರ, ಅಪಘಾತದಲ್ಲಿ ರೈಲಿನ ಕಪ್ಲರ್ ಕವರ್ ಮತ್ತು ಬಿಸಿಯು ಕವರ್ ಹಾನಿಯಾಗಿದೆ. ರೈಲಿನ ನೀರಿನ ವ್ಯವಸ್ಥೆಗೂ ಹಾನಿಯಾಗಿದ್ದು, ನೀರು ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಕಳೆದ ಒಂದು ತಿಂಗಳಲ್ಲಿ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಹಸುಗಳಿಗೆ ಡಿಕ್ಕಿ ಹೊಡೆದಿತ್ತು ಅದಾದ ಎರಡು ದಿನದ ಬಳಿಕ ನಾಲ್ಕು ಎಮ್ಮೆಗಳಿಗೂ ರೈಲು ಡಿಕ್ಕಿ ಹೊಡೆದಿದೆ ಇಂದು ಗೂಳಿಗೆ ಡಿಕ್ಕಿ ಹೊಡೆದು ಒಂದೇ ತಿಂಗಳಲ್ಲಿ ಮೂರು ಬಾರಿ ಜಾನುವಾರುಗಳಿಗೆ ಡಿಕ್ಕಿ ಹೊಡೆದಂತಾಗಿದೆ.

ಇದನ್ನೂ ಓದಿ : ಗುಜರಾತ್ ಚುನಾವಣೆ: ನಿಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ…ಅಭಿಯಾನಕ್ಕೆ ಆಪ್ ಚಾಲನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next