Advertisement

ಕಡಿಮೆ ದರದಲ್ಲಿ ಹಣ್ಣು, ಹೂ ಮಾರಾಟ

11:17 AM Jul 29, 2020 | Suhan S |

ಚಿಂತಾಮಣಿ: ರೈತರಿಂದ ಖರೀದಿಸಿ ಗ್ರಾಹಕರಿಗೆ ನೇರವಾಗಿ ಹಣ್ಣು ಹಂಪಲು, ಹೂಗಳನ್ನು ದೀನ್‌ ದಯಾಳ್‌ ಗ್ರಾಮೀಣಾ ಭಿವೃದ್ಧಿ ವತಿಯಿಂದ ಜೀವಫ‌ಲ ಮುಖಾಂತರ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಮಹೇಶ್‌ ಹೇಳಿದರು.

Advertisement

ನಗರದ ಪ್ರಭಾಕರ್‌ ಬಡಾವಣೆಯಲ್ಲಿರುವ ಜೀವಜಲ ಮತ್ತು ಜೀವಫ‌ಲ ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಪ್ರಯುಕ್ತ ಜನ ಜಂಗುಳಿ ಹೆಚ್ಚಾಗುತ್ತದೆ. ಕೋವಿಡ್‌ ನಿಯಂತ್ರಿಸಲು ಕಷ್ಟಕರವಾಗುತ್ತದೆ. ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆ ಮಾರಾಟ ಮಾಡಲು ಹಾಗೂ ಗ್ರಾಹಕರು ತೆಗೆದುಕೊಳ್ಳಲು ತೊಂದರೆಯಾಗುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ರೈತರಿಂದ ನೇರವಾಗಿ ಪಡೆದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದರು.

ಎಲ್ಲಾ ವರ್ಗದ ಜನರು ಹಬ್ಬ ಸಂತೋಷದಿಂದ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಜೀವಫ‌ಲ ಸ್ಥಾಪನೆ ಮಾಡಿದ್ದು, ಪ್ರಾರಂಭದಿಂದ 200 ಮತ್ತು 400 ರೂ.ಗೆ ಜೀವಫ‌ಲ ಮಾರಾಟ ಮಾಡುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪ್ರಭಾಕರ್‌ ಬಡಾವಣೆ ಮತ್ತು ವಾಸವಿ ರಿಜೆನ್ಸಿ ಬಳಿ ಮಾರಾಟ ಮಾಡುತ್ತಿದ್ದು, ಗೌರಿ ಗಣೇಶ ಹಬ್ಬಕ್ಕೆ 25 ರಿಂದ 30 ಕಡೆ ಈ ರೀತಿಯ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು. ವಕೀಲ ನಾ.ಶಂಕರ್‌, ರಾಜೇಶ್‌, ಶ್ರೀನಾಥ್‌, ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗೋವಿಂದ್‌, ನಗರ ಮಂಡಲ ಕಾರ್ಯದರ್ಶಿ ಸಿ.ಆರ್‌.ವೆಂಕಟೇಶ್‌, ಸುನೀಲ್‌, ಪಿ.ವಿ.ಕೃಷ್ಣ, ಭಾಸ್ಕರ್‌, ರಾಜೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next