Advertisement

ಹೆಚ್ಚುತ್ತಿದೆ ಸೋಂಕು ಸಂಕಟ: ಹಳೆಯಂಗಡಿ ಸ್ವಯಂ ಪ್ರೇರಿತ ಬಂದ್ ಗೆ ಮನವಿ

06:10 PM Jul 04, 2020 | keerthan |

ಹಳೆಯಂಗಡಿ: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಯಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ವರ್ತಕರಿಗೆ ಮನವಿ ಮಾಡಲಾಗುತ್ತಿದೆ.

Advertisement

ಹಳೆಯಂಗಡಿ ಪರಿಸರದಲ್ಲಿ ಇತ್ತೀಚೆಗೆ ಎರಡು ಕೋವಿಡ್ ಪ್ರಕರಣಗಳು ಕಂಡುಬಂದಿದ್ದವು. ಈ ಇಬ್ಬರೂ ಸೋಂಕಿತರು ಹಳೆಯಂಗಡಿ ಪೇಟೆಗೆ ಭೇಟಿ ಇತ್ತೀಚೆಗೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೇಟೆಯನ್ನು ಬಂದ್ ಮಾಡಲು ನಿರ್ಧಾರಿಸಲಾಗಿದೆ.

ಹಳೆಯಂಗಡಿಯಲ್ಲಿ ಜು.5 ಸೋಮವಾರದಿಂದ ಸ್ವಯಂ ಪ್ರೇರಿತವಾಗಿ ಪೇಟೆಯನ್ನು ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಿಗೆ ಮನವಿ ಮಾಡಲಾಗಿದೆ.

ಮೂಲ್ಕಿ ಕೆ ಎಸ್ ರಾವ್ ನಗರ ಸೀಲ್ ಡೌನ್: ಮೂಲ್ಕಿಯ ಕೆ ಎಸ್ ರಾವ್ ನಗರದ ಅಂಗಡಿ ಮಾಲೀಕರೊಬ್ಬರು ಪತ್ನಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇದು ಜನವಸತಿ ಪ್ರದೇಶವಾದ ಕಾರಣ ಸೋಂಕಿತ ಮಹಿಳೆ ವಾಸವಿರುವ ಮನೆಯ ಸಂಪರ್ಕ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next