Advertisement
ದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ (ಆರ್ಟಿಇ) ಅನುಷ್ಠಾನದ ನಂತರ ಪರೀಕ್ಷೆಗೆ ಬದಲು ನಿರಂತರ ಸಮಗ್ರ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ನಿತ್ಯವೂ ಶೈಕ್ಷಣಿಕ ಹಾಗೂ ಶೈಕ್ಷಣೇತರ ಮೌಲ್ಯಮಾಪನಕ್ಕೆ ಒಳಪಡುತ್ತಾರೆ. 1ರಿಂದ 9ನೇ ತರಗತಿಯ ಪ್ರತಿ ವಿದ್ಯಾರ್ಥಿಯೂ ಶಿಕ್ಷಕರ ಕಣ್ಗಾವಲಿನಲ್ಲಿ ಇರುತ್ತಾರೆ ಮತ್ತು ಪ್ರತಿ ವಿದ್ಯಾರ್ಥಿಗಳನ್ನೂ ಪರೀಕ್ಷೆಗೆ ಒಳಪಡಿಸುವುದೂ ಇರುತ್ತದೆ. ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಇಲಾಖೆಯಿಂದಲೇ ಆಂತರಿಕ ಮೌಲ್ಯಮಾಪನ ಸಮೀಕ್ಷೆ ನಡೆಸಲಾಗುತ್ತದೆ. 3, 5 ಮತ್ತು 8ನೇ ತರಗತಿಯ ಮಕ್ಕಳಿಗೆ ಈ ರೀತಿಯ ಸಮೀಕ್ಷೆ ನಡೆಸಿ, ಅದರ ಫಲಿತಾಂಶದ ಆಧಾರದಲ್ಲಿ ಶೈಕ್ಷಣಿಕ ಗುಣಮಟ್ಟ ಅಳೆಯಲಾಗುತ್ತದೆ.
ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಮಾಡಲು ಕಾರಣ ಏನು ಎಂಬುದನ್ನೂ ಸಚಿವರು ಸ್ಪಷ್ಟಪಡಿಸಿಲ್ಲ.
Related Articles
ಮೂರ್ನಾಲ್ಕು ವರ್ಷಗಳ ಹಿಂದೆ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ) ಸಿಬಿಎಸ್ಇ ಪಠ್ಯಕ್ರಮದ ಎಲ್ಲ ಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ಜಾರಿಗೆ ತಂದಿತ್ತು. ಪರಿಣಾಮಕಾರಿ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ರದ್ದು ಗೊಳಿಸಿ, ಹಳೇ ಪದ್ಧತಿಯನ್ನೇ ಈಗ ಅನುಸರಿಸುತ್ತಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಪುಸ್ತಕ ನೋಡಿ ಉತ್ತರ ಬರೆಯುವುದು ಅಷ್ಟು ಸುಲಭವಲ್ಲ. ಇಂತಹ ವೈಜ್ಞಾನಿಕ ಪದ್ಧತಿಯನ್ನು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗಿ
ಅಳವಡಿಸಿಕೊಳ್ಳುತ್ತಾರೆ. ಪುಸ್ತಕ ಪೂರ್ತಿಯಾಗಿ ಓದಿ, ನೆನಪಿಟ್ಟುಕೊಳ್ಳಬಲ್ಲವರು ಮಾತ್ರ ಇದರಲ್ಲಿ ಸಫಲತೆ ಕಾಣಲು ಸಾಧ್ಯ ಎನ್ನುತ್ತಾರೆ ಶಿಕ್ಷಣ ತಜ್ಞರು.
Advertisement
ಬರವಣಿಗೆ ಪ್ರಗತಿ ಕಾಣುವುದು2 ರಿಂದ 5ನೇ ತರಗತಿವರೆಗೆ ಮಕ್ಕಳನ್ನು ಭಯಮುಕ್ತರನ್ನಾಗಿ ಮಾಡಬಹುದಾಗಿದೆ. ನೆನಪು, ತರ್ಕಕ್ಕೂ ಮಹತ್ವ ವಿದೆ. 6ನೇ ತರಗತಿ ಬಳಿಕ ಕಂಠಪಾಠದ ಮೂಲಕ ಪರೀಕ್ಷೆ ಬರೆದರೆ ನೆನಪಿನ ಶಕ್ತಿ ಕುಂಠಿತವಾಗುವ ಸಾಧ್ಯತೆಯಿದೆ.
– ಡಿ.ಎಂ. ದಾನೋಜಿ, ಕಾರ್ಯದರ್ಶಿ, ಪ್ರೌಢ ಶಿಕ್ಷಣ
ಪರೀಕ್ಷಾ ಮಂಡಳಿ ಬೆಂಗಳೂರು. ಸೃಜನಶೀಲತೆ ನಾಶ
ಪುಸ್ತಕ ನೋಡಿ ಪರೀಕ್ಷೆ ಬರೆಯುವುದರಿಂದ 1ರಿಂದ 5ನೇ ತರಗತಿಯ ಮಗುವಿನ ಸೃಜನಶೀಲತೆ ನಾಶವಾಗಲಿದೆ. ಮಗು ಓದು,ಬರೆಯುವುದರಿಂದ ವಂಚಿತವಾಗಲಿದೆ. ಕ್ರಿಯಾಶೀಲ ಮನಸ್ಸು ಬತ್ತಿ ಹೋಗುತ್ತದೆ.
– ಮಹಾಂತೇಶ ಮಲ್ಲನಗೌಡರ,
ಶಿಕ್ಷಣ ಚಿಂತಕರು, ಕೊಪ್ಪಳ ಸಚಿವರು ತಿಳಿದಿರಬೇಕು
ಶಿಕ್ಷಣ ಸಚಿವರು ಈ ವಿಚಾರದಲ್ಲಿ ತಮ್ಮ ಸ್ಪಷ್ಟತೆ ಹೊಂದ ಬೇಕು. ಅವರ ಕಲ್ಪನೆ,ಅದು ಜಾರಿಯಾದರೆ ಆಗುವ ಬದಲಾವಣೆ, ಶಿಕ್ಷಣದಲ್ಲಿ ಸುಧಾರಣೆ ತರಲು ಸಹಾಯಕ ವಾಗುತ್ತದೆಯೇ ಎಂಬ ಚರ್ಚೆ ಆಗಲಿ.
– ಶಂಕರ ಹಲಗತ್ತಿ, ಶಿಕ್ಷಣ ತಜ್ಞ. ಧಾರವಾಡ ಪುಸ್ತಕ ಓದಿ ಪರೀಕ್ಷೆ ಎದುರಿಸಲಿ
ಮಕ್ಕಳಿಗೆ ಜ್ಞಾನ, ವಿವೇಕ, ವಿವೇಚನೆ,ಜ್ಞಾಪಕ ಶಕ್ತಿ ಕಲಿಸುವುದು ಪರೀಕ್ಷೆಗಳ ಗುರಿ. ಪುಸ್ತಕ ನೋಡಿ ಪರೀಕ್ಷೆ ಬರೆದರೆ ಇದೆಲ್ಲ ಮಕ್ಕಳಲ್ಲಿ ಬರಲು ಸಾಧ್ಯವಿಲ್ಲ. ಪುಸ್ತಕ ನೋಡಿ ಪರೀಕ್ಷೆ ಬರೆ ಯುವುದಾದರೆ, ಶಾಲೆ- ಕಾಲೇಜು ಏಕೆ ಬೇಕು.
– ಡಾ.ವಿಜಯಕುಮಾರ ಕಟಗಿಹಳ್ಳಿಮಠ,
ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಈಗಿನ ಸಿಸಿಎ ಪದ್ಧತಿಯನ್ನೇ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ ಸಾಕು. ಯಾವ ಪರೀಕ್ಷೆಯೂ ಬೇಕಾಗಿಲ್ಲ. ಶಿಕ್ಷಣ ಶಾಸOಉವೂ ಒಂದು ಶಿಸ್ತು. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ
ಸದೃಢರನ್ನಾಗಿಸಲು ಶಿಕ್ಷಕರಿಗೆ ತರಬೇತಿ ನೀಡಬೇಕು.
– ಡಾ.ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಬರುವುದು ಸಾಧ್ಯವೇ ಇಲ್ಲ. ರಾಜಕೀಯ ವ್ಯಕ್ತಿಗಳು ಮಾತನಾಡುವ ಮೊದಲು ಸಾಧಕ-ಬಾಧಕ ನೋಡಿದರೆ ಉತ್ತಮ. ಇದರಿಂದ ಬಹಳ ದೊಡ್ಡ ಗೊಂದಲ, ಚರ್ಚೆಗಳು ಹುಟ್ಟಿಕೊಳ್ಳುತ್ತವೆ.
– ಡಾ| ಎಂ. ಮೋಹನ್ ಆಳ್ವ, ಶಿಕ್ಷಣ ತಜ್ಞರು, ಅಧ್ಯಕ್ಷ,
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ ವಿನೂತನ ಪ್ರಯತ್ನ
ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಪ್ರಯತ್ನ ಸ್ವಾಗತಾರ್ಹ. ಇಲಾಖೆಗಳಲ್ಲಿ ಉನ್ನತ ಹುದ್ದೆಗಳಿಗಾಗಿ ಪುಸ್ತಕ ನೋಡಿಯೇ ಪರೀಕ್ಷೆ ಬರೆಯುವ ಪದಟಛಿತಿ ಇದೆ. ಮಕ್ಕಳಿಗೆ ಅದು ಅನ್ವಯವಾದರೆ ತಪ್ಪಿಲ್ಲ. ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಅಲ್ಲಿನ ಫಲಿತಾಂಶ ನೋಡಿಯೇ ಅದನ್ನು ಮುಂದುವರಿಸಬೇಕೆ ಬೇಡವೇ ಎಂದು ನಿರ್ಧರಿಸಲಾಗುತ್ತದೆ.
– ಹಫಿಜುಲ್ಲಾ, ಶಿಕ್ಷಣ ಪ್ರೇಮಿ, ರಾಯಚೂರು ಶಿಕ್ಷಣದ ಮೇಲೆ ಪರಿಣಾಮ
ಮಕ್ಕಳ ಮನಸ್ಥಿತಿ ಹಾಗೂ ಪ್ರಾಥಮಿಕ ಹಂತದ ಶಿಕ್ಷಣದ ಜ್ಞಾನ ಇಲ್ಲದ ಹೆಚ್ಚಿನ ಓದಿನವರು ಶಿಕ್ಷಣ ಸಚಿವರಾದರೆ ಶೈಕ್ಷಣಿಕವಾಗಿ ಇಂಥ ಅವೈಜ್ಞಾನಿಕ ನಿರ್ಧಾರಗಳನ್ನೇ ಕೈಗೊಳ್ಳಲು ಸಾಧ್ಯ. ಪುಸ್ತಕ ನೋಡಿ ಬರೆಯುವುದು ಅಕ್ಷರಶಃ ಶುದ್ಧೀಕರಣಕ್ಕೆ ಯೋಗ್ಯವೇ ಹೊರತು, ಅದೇ ಇಡೀ ಶಿಕ್ಷಣ
ಅಲ್ಲ. ಯಾವುದೇ ಮಗು ಓದದೇ ಬರೆಯಲಾರದು.
– ಈಶ್ವರಚಂದ್ರ ಚಿಂತಾಮಣಿ, ವಿಜಯಪುರ, ಮಾಜಿ
ಸದಸ್ಯರು, ಪಠ್ಯ ಪುಸ್ತಕ ರಚನಾ ಸಮಿತಿ ಸರಿಯಾಗಲಾರದು
ಪುಸ್ತಕ ನೋಡಿ ಪರೀಕ್ಷೆ ಬರೆಸುವ ಪದ್ಧತಿಯ ಸಾಧಕ-ಬಾಧಕ ಚರ್ಚೆ ಆಗ ಬೇಕು. ಪುಸ್ತಕ ನೋಡಿ ಪರೀಕ್ಷೆ ಬರೆಸುವ ಪದ್ಧತಿ ಸರಿಯಾಗಲಾರದು ಎನ್ನುವುದು ನನ್ನ ಅಭಿಪ್ರಾಯ.
– ಬಸವರಾಜ ಹೊರಟ್ಟಿ,
ಹಂಗಾಮಿ ಸಭಾಪತಿ ನಕಲಿಗೆ ಅವಕಾಶ
ಪ್ರಾಥಮಿಕ ಹಂತದಲ್ಲಿ ಮಕ್ಕಳು ಈ ಪದ್ಧತಿಗೆ ಒಗ್ಗಿಕೊಳ್ಳಬಹುದು. ಆದರೆ, ಈ ಹಂತದಲ್ಲಿ ಕಷ್ಟ. ಹೊಸ ವ್ಯವಸ್ಥೆ ಜಾರಿಗೆ ತಂದರೆ ನಕಲು ಮಾಡಲು ಅವಕಾಶ ಮಾಡಿ ಕೊಟ್ಟಂತೆ ಆಗುತ್ತದೆ.
– ಡಾ.ಎಂ.ಜಿ. ಈಶ್ವರಪ್ಪ,
ವಿಶ್ರಾಂತ ಪ್ರಾಂಶುಪಾಲ, ಶಿಕ್ಷಣ ತಜ್ಞ ಚಿಂತನೆ ಸಂತೋಷದಾಯಕ
ಪುಸ್ತಕ ನೋಡಿ ಪರೀಕ್ಷೆ ಬರೆಯುವ ಚಿಂತನೆ ಸಂತೋಷದಾಯಕ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ಜ್ಞಾಪಕಶಕ್ತಿ ಬೆಳೆಯಬೇಕಿದ್ದು, ನಂತರದಲ್ಲಿ ಅವರ ವಿಶ್ಲೇಷಣಾತ್ಮಕ ಪರೀಕ್ಷೆ ಆಗಬೇಕಿದೆ.
– ಪ್ರೊ.ಎಂ.ಕೃಷ್ಣೇಗೌಡ, ನಿವೃತ್ತ
ಪ್ರಾಂಶುಪಾಲರು, ಮೈಸೂರು