Advertisement

ದೇವೇಗೌಡರು ಇಳಿವಯಸ್ಸಲ್ಲೂ ಸುತ್ತಾಡುವುದನ್ನು ಕಂಡಾಗ ನೋವಾಗುತ್ತದೆ: ಸಚಿವ ರಾಜಣ್ಣ ವ್ಯಂಗ್ಯ

08:47 PM Apr 04, 2024 | Team Udayavani |

ತುಮಕೂರು:  ಮಗ, ಮೊಮ್ಮಗ, ಅಳಿಯನಿಗಾಗಿ ದೇವೇಗೌಡರು ಈ ಇಳಿವಯಸ್ಸಿನಲ್ಲೂ ಸುತ್ತುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಅಧಿಕಾರದ ಆಸೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಾಯುವ ಕಾಲದಲ್ಲಿಯೂ ಅವರಿಗೆ ನೆಮ್ಮದಿ ಕೊಡಲಿಲ್ಲವಲ್ಲ ಎಂದು ಅನುಕಂಪ ಮೂಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವ್ಯಂಗ್ಯವಾಡಿದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇ ಗೌಡರ ನಾಮಪತ್ರ ಸಲ್ಲಿಕೆ ವೇಳೆ ಜನರ‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಕುರಿತು ದೇವೇಗೌಡರು, ದೇವೇಗೌಡರ ಕುರಿತು ಯಡಿಯೂರಪ್ಪ ಬೈದು ಬಳಸಿದ ಭಾಷೆಗಳ ದಾಖಲೆ ಇದೆ. ಇದನ್ನು ಅವಲೋಕಿಸಿದರೆ ಅವರದ್ದು ಅಪವಿತ್ರ ಮೈತ್ರಿ ಎಂಬುದು ಸ್ಪಷ್ಟ. ಇದು ದೇವೇಗೌಡರು ತಮ್ಮ ಕುಟುಂಬದಲ್ಲಿಯೇ ಅಧಿಕಾರ ಉಳಿಯಬೇಕೆಂಬ ಕಾರಣಕ್ಕೆ ಮಾಡಿಕೊಂಡ ಒಪ್ಪಂದ ಎಂದು ಟೀಕಿಸಿದರು.

ದೇವೇಗೌಡರು ತುಮಕೂರಿಗೆ ಬಂದು ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಮತ ಕೇಳುತ್ತಿಲ್ಲ. ಬದಲಿಗೆ ದೇವೇಗೌಡರನ್ನು ಸೋಲಿಸಿದವರನ್ನು ಸೋಲಿಸಿ ಎಂದು ಕರೆ ಕೊಡುತ್ತಿದ್ದಾರೆ. 2019ರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ಇದೇ ಜಿ.ಎಸ್‌.ಬಸವರಾಜು ಮತ್ತು ವಿ.ಸೋಮಣ್ಣ. ದೇವೇಗೌಡರು ಕೇಳುತ್ತಿರುವುದು ಕೂಡ ಅವರನ್ನು ಸೋಲಿಸಿ ಎಂದು ರಾಜಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next