Advertisement

ಜಾತ್ಯತೀತತೆ ಇಂದಿರಾ ನಿಲುವು: ಸೋನಿಯಾ

09:44 AM Nov 20, 2017 | |

ಹೊಸದಿಲ್ಲಿ: “ಮಾಜಿ ಪ್ರಧಾನಿ ಇಂದಿರಾ ಗಾಂಧಿ ಒಬ್ಬ ಜಾತ್ಯತೀತ ರಾಜಕಾರ ಣಿಯಾಗಿದ್ದರಲ್ಲದೆ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳುವಂಥ ಶಕ್ತಿಗಳನ್ನು ಅವರು ಕೊನೆಯವರೆಗೂ ವಿರೋಧಿಸುತ್ತಿದ್ದರು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪರೋಕ್ಷವಾಗಿ ಬಿಜೆಪಿ, ಸಂಘ ಪರಿವಾರಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. 

Advertisement

ಇಂದಿರಾ ಗಾಂಧಿಯವರ ಜನ್ಮ ಶತಮಾ ನೋತ್ಸವ ಹಿನ್ನೆಲೆಯಲ್ಲಿ ರವಿವಾರ, ನವದಿಲ್ಲಿಯ ಸಫಾªರ್‌ಜಂಗ್‌ ರಸ್ತೆಯ ಲ್ಲಿನ ತಮ್ಮ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, “”ಇಂದಿರಾ ಗಾಂಧಿಯವರನ್ನು ಉಕ್ಕಿನ ಮಹಿಳೆ ಎಂದು ಕರೆಯಲಾಗುತ್ತದೆ. ಆದರೆ, ಅಂಥ ದಿಟ್ಟತನ ಅವರ ಗುಣಗಳ ಒಂದಂಶ ಮಾತ್ರ. ಔದಾರ್ಯ  ಹಾಗೂ ಮಾನವೀ ಯತೆಗಳೂ ಅವರ ಗುಣಗಳ ಮತ್ತೆರಡು ಪ್ರಮುಖ ಅಂಶಗಳಾಗಿದ್ದವು” ಎಂದು ಶ್ಲಾ ಸಿದರು. ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್‌  ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

ಸೆಂಟ್ರಲ್‌ ಹಾಲ್‌ನಲ್ಲಿ ಸಮಾರಂಭ: ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಇಂದಿರಾಗಾಂಧಿ ಸಂಸ್ಮರಣೆ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಬಿಜೆಪಿ ಧುರೀಣ ಎಲ್‌.ಕೆ. ಆಡ್ವಾಣಿ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಪಾಲ್ಗೊಂಡಿದ್ದರು. ಏತನ್ಮಧ್ಯೆ, ಪ್ರಧಾನಿ ಮೋದಿ ಟ್ವಿಟರ್‌ ಮೂಲಕ ಇಂದಿರಾ ಗಾಂಧಿಯವರಿಗೆ ಗೌರವ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next