Advertisement

ದ್ವಿತೀಯ ಪಿಯು ಪಠ್ಯ ಪುಸ್ತಕ ಪರಿಷ್ಕರಣೆ ಬೇಡ

11:15 AM Jun 07, 2022 | Team Udayavani |

ಕಲಬುರಗಿ: ವಿವಾದಕ್ಕೆ ಕಾರಣವಾಗಿರುವ ಪ್ರಸಕ್ತ ಸಾಲಿನ ಪಠ್ಯ ಪುಸ್ತಕ ಸಮಿತಿಯ ಬದಲಾವಣೆಯನ್ನು ಕೈ ಬಿಡಬೇಕು. ಕಳೆದ ವರ್ಷದ ಪುಸ್ತಕಗಳನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಸೋಮವಾರ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಪಿಯುಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

Advertisement

ಪರಿಷ್ಕೃತ ಮತ್ತು ಮರು ಪರಿಷ್ಕೃತ ಪಠ್ಯದಲ್ಲಿ ದೋಷಗಳು ಹೆಚ್ಚಾಗಿವೆ. ಸರಕಾರ ಯಾವುದೋ ಉದ್ದೇಶಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿದೆ. ಅದು ಅಲ್ಲದೆ, ಇಲ್ಲಿಯವರೆಗೆ ಓದಿರುವ ವಿಷಯಗಳನ್ನು ಸ್ವಹಿತಾಸಕ್ತಿಯಂತೆ ಬದಲಾವಣೆ ಮಾಡುವ ಹುನ್ನಾರಕ್ಕೆ ಕೈ ಹಾಕಿದೆ. ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳ ತಿಳಿವು ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಸಂಘಟಕರು ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆಯಲ್ಲಿ ಜಿಲ್ಲಾಧ್ಯಕ್ಷ ಹಣಮಂತ ಎಸ್‌.ಎಚ್‌ ಮಾತನಾಡಿ, ಸರಕಾರವೇನೋ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದೆ. ಕೆಲವು ವಿಷಯಗಳನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡುತ್ತಿದೆ. ಕೆಲವು ಖ್ಯಾತ ನಾಮ ದೇಶ ಸೇವೆ ಗೈದವರನ್ನು ತೆಗೆದು ಹಾಕಿ ಇತರರನ್ನು ಸೇರಿಸಿದ್ದಾರೆ. ಸೇರಿಸಿದ್ದಕ್ಕೆ ಹಲವು ಸಮರ್ಥನೆಗಳನ್ನು ನೀಡಲಾಗಿದೆ. ಇದೆಲ್ಲವೂ ಸರಿಯಾದ ನಡೆಯಲ್ಲ ಎಂದು ದೂರಿದ್ದಾರೆ. ಆದ್ದರಿಂದ ಪರಿಷ್ಕರಣೆ ಕೈ ಬಿಟ್ಟು ಮೊದಲಿದ್ದ ಪಠ್ಯ ಮುಂದುವರೆಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಣಮಂತ ಎಸ್‌ ಎಚ್‌, ತುಳಜರಾಮ ಎನ್‌.ಕೆ, ಸ್ನೇಹಾ ಕಟ್ಟಿಮನಿ, ಶಿಲ್ಪಾ ಬಿಕೆ, ವೆಂಕಟೇಶ ದೇವದುರ್ಗ,ಅರುಣ ಹಿರೆಬಾನರ್‌, ಗೋವಿಂದ ಯಳವಾರ, ಶಿಲ್ಪಾ ಜೆಕೆ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next