Advertisement

ವಿಶ್ವವೇ ಭಾರತದತ್ತ ನೋಡಲು ಶಿಲ್ಪಗಳೇ ಕಾರಣ

02:35 PM Jan 02, 2022 | Team Udayavani |

ಕಲಬುರಗಿ: ಜಗತ್ತಿನಾದ್ಯಂತ ಭಾರತದ ಕೀರ್ತಿ ಹೆಚ್ಚಾಗಲು ಅಮರಶಿಲ್ಪಿ ಜಕಣಾಚಾರಿ ಅವರಂತವರು ರಚಿಸಿರುವ ಕಲಾಕೌಶಲ ಹೊಂದಿರುವ ಶಿಲ್ಪಗಳು ಕಾರಣವಾಗಿದೆ ಎಂದು ಸುಲೇಪೇಟ್‌ನ ವಿಶ್ವಕರ್ಮ ಏಕದಂಡಿನಿ ಮಠದ ದೊಡ್ಡೇಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಜಕಣಾಚಾರಿ ವಿಶ್ವವೇ ಮೆಚ್ಚುವಂತ ಕಲಾ ಕಾರ್ಯವನ್ನು ಮಾಡಿದ್ದಾರೆ. ಅವರನ್ನು ಕಾಲ್ಪನಿಕ ವ್ಯಕ್ತಿ ಎಂದು ಬಿಂಬಿಸುವ ಕೆಲಸವನ್ನು ಕೆಲವರು ಮಾಡಿದ್ದರು. ಇದಕ್ಕೆ ಸಮಾಜದಿಂದ ತಕ್ಕ ಉತ್ತರ, ಪ್ರತಿಕ್ರಿಯೆ ನೀಡದ್ದರಿಂದ ನಂತರ ಕ್ಷಮೆ ಕೇಳಿದ್ದರು. ಆದ್ದರಿಂದ ಸಮಾಜದ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕು ಎಂದರು.

ಶ್ರೀ ಪ್ರಣವ ನಿರಂಜನ ಮಹಾಸ್ವಾಮಿ ಮಾತನಾಡಿ, ಜಕಣಾಚಾರಿ ಅವರದ್ದು ಮೇರು ಸದೃಶ್ಯ ವ್ಯಕ್ತಿತ್ವವಾಗಿತ್ತು. ಅವರ ಕಲಾ ವೈಭವದ ಕೊಡುಗೆ ಅಪಾರ. ಅಮರಶಿಲ್ಪಿಗಳ ಕೀರ್ತಿ ಅಜರಾಮರವಾಗಿರಬೇಕು. ಎಂದೆಂದಿಗೂ ಮರೆಯಲಾಗದಂತ ಸಾಧನೆಯನ್ನು ಅವರು ಮಾಡಿದ್ದಾರೆ. ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ಶಿಲ್ಪ ಕಲೆಯನ್ನು ರಚಿಸಿದ್ದು ನಮ್ಮ ದೇಶದ ಹೆಮ್ಮೆ ಎಂದರು.

ಜಕಣಾಚಾರಿ ಅವರ ಬಗ್ಗೆ ಉಪನ್ಯಾಸಕ ರಾಜೇಂದ್ರ ಬಡಿಗೇರ ಉಪನ್ಯಾಸ ನೀಡಿದರು. ಶಿಲ್ಪಕಲಾವಿದರಾದ ರಾಜಶೇಖರ, ವೀರೇಶ, ರವಿ, ಮೌನೇಶ, ಶರಣು,Sculptures are the reason for the world to see India ವಿನೋದ, ವಿಶ್ವನಾಥ, ಮನೋಜ, ಮೌನೇಶ ಕಂಬಾರ, ಅರSculptures are the reason for the world to see Indiaವಿಂದ ಅವರನ್ನು ವಿಶ್ವಕರ್ಮ ಸಮಾಜದಿಂದ ಸ್ಮಾನಿಸಲಾಯಿತು. ಇದಕ್ಕೂ ಮುನ್ನ ಜಿಲ್ಲಾ ಧಿಕಾರಿಗಳ ಕಚೇರಿಯ ಚುನಾವಣೆ ಶಾಖೆಯ ತಹಶೀಲ್ದಾರ್‌ ಮಹಾಂತೇಶ ಮುಡಬಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

Advertisement

ವಿಶ್ವಕರ್ಮ ಸಮಾಜದಿಂದ ವಿವಿಧ ಬೇಡಿಕೆಗಳನ್ನು ಮುಖಂಡರು ಮಂಡಿಸಿದರು. ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣಕ್ಕೆ ವಿಶ್ವಕರ್ಮರ ನಾಮಕರಣ ಮಾಡಬೇಕು. ಹಂಪಿ ಉತ್ಸವದಲ್ಲಿ ಶಿಲ್ಪಿಗಳಿಗೂ ಆದ್ಯತೆ ನೀಡಬೇಕು. ಬೇಲೂರು ಚನ್ನಕೇಶವ ದೇವಸ್ಥಾನದ ಎದುರು ಜಕಣಾಚಾರಿ ಮೂರ್ತಿ ನಿರ್ಮಿಸಬೇಕು. ತಾಂತ್ರಿಕ ವಿವಿಗೆ ಜಕಣಾಚಾರಿ ನಾಮಕರಣ ಮಾಡಬೇಕು. ಕಲಬುರಗಿ ರಂಗ ಮಂದಿರದಲ್ಲಿ ಡಾ| ಎಸ್‌.ಎಂ. ಪಂಡಿತರ ಮೂರ್ತಿ ಪ್ರತಿಷ್ಠಾಪಿಸಬೇಕು ಹಾಗೂ ಸರ್ಕಾರದಿಂದ ಶಿಲ್ಪಿಗಳನ್ನು ಸನ್ಮಾನಿಸಬೇಕೆಂದು ಮನವಿ ಮಾಡಿದರು.

ವಿಶ್ವಕರ್ಮ ಎಕದಂಡಗಿ ಮಠದ ಸುರೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ದೇವಿಂದ್ರಪ್ಪ ಸುತಾರ, ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಉಪಾಧ್ಯಕ್ಷ ಕಮಲಾಕರ ಅಣಕಲ್‌, ಅಶೋಕ ಪೋದ್ದಾರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next