Advertisement

ಗೃಹ ಸಚಿವರ ವಿರುದ್ಧ ಸ್ಕ್ರೂ ಡ್ರೈವರ್‌ ಅಭಿಯಾನ

12:16 PM Feb 04, 2018 | Team Udayavani |

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆಗೆ ಆರೋಪಿಗಳು “ಸ್ಕ್ರೂಡ್ರೈವರ್‌ ಬಳಸಿದ್ದಾರೆ’ ಎಂದಿರುವ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ “ಸ್ಕ್ರೂಡ್ರೈವರ್‌ ಅಭಿಯಾನ’ ನಡೆಸುವುದಾಗಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

Advertisement

ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ಯುವ ಮೋರ್ಚಾದ ಕಾರ್ಯಕರ್ತರು ಕೊರಿಯರ್‌ ಮೂಲಕ ಸ್ಕ್ರೂಡ್ರೈವರ್‌ಗಳನ್ನು ಗೃಹ ಸಚಿವರಿಗೆ ಕಳುಹಿಸಿಕೊಡಲಿದ್ದಾರೆ ಎಂದು ತಿಳಿಸಿದರು. ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಸಂವೇದನೆ ಕಳೆದುಕೊಂಡಿದ್ದಾರೆ.

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಪತ್ರಕರ್ತೆ ಗೌರಿ ಲಂಕೇಶ್‌, ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌, ಬಿಜೆಪಿಯ ಸಂತೋಷ್‌ ಹತ್ಯೆಯಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫ‌ಲರಾಗಿದ್ದಾರೆ. ಗೃಹ ಖಾತೆ ಹೊಣೆ ಹೊತ್ತಿರುವ ರಾಮಲಿಂಗಾರೆಡ್ಡಿ ಇದರ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಹೀಗಾಗಿ ಅವರ ವಿರುದ್ಧ ಯುವ ಮೋರ್ಚಾದ ವತಿಯಿಂದ ಸ್ಕ್ರೂಡ್ರೈವರ್‌ ಅಭಿಯಾನ ಮಾಡಲಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next