Advertisement

ಉತರ ಪ್ರದೇಶದ ವಲಸೆ ಕಾರ್ಮಿಕರ ಪರದಾಟ

01:52 PM May 06, 2020 | mahesh |

ದೇವನಹಳ್ಳಿ: ಸುಮಾರು 20 ಕ್ಕೂ ಹೆಚ್ಚಿನ ವಲಸೆ ಕಾರ್ಮಿಕರು ತಾಲೂಕಿನ ಬಚ್ಚಹಳ್ಳಿ ಗೇಟ್‌ ಮೇಲ್ಸೇತುವೆ ಕೆಲ ಭಾಗದ ರಸ್ತೆಯಲ್ಲಿ ಮಲಗುತ್ತಿದ್ದು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಮೇಲ್ಸೇತುವೆ ಕೆಲ ಭಾಗದ ಕನ್ನಮಂಗಲ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಒಂದು ಭಾಗದಲ್ಲಿ ಕಲ್ಲನ್ನು ಇಟ್ಟು ಟಾರ್ಪಲ್‌ ಹಾಸಿ ಅದರ ಮೇಲೆ ಮಲಗಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪಗಳಲ್ಲಿ ಬಣ್ಣದ ಕೆಲಸ ಮಾಡುವ ಕಾರ್ಮಿಕರಾಗಿದ್ದು ಕಳೆದ 1 ವಾರದಿಂದ 3 ದಿನ 1 ಕಡೆ , 3 ದಿನ ಮತ್ತೂಂದು ಕಡೆ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಅಧಿಕಾರಿಗಳು ಕಾರ್ಮಿಕರ ಸಮಸ್ಯೆ ಆಲಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಎಷ್ಟರ ಮಟ್ಟಿಗೆ‌ ಸರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಈಗಾಗಲೇ ಸರ್ಕಾರ ವಲಸೆ ಕಾರ್ಮಿಕರನ್ನು ತಮ್ಮ ಸ್ವರಾಜ್ಯಗಳಿಗೆ ಕಳುಹಿಸಿಕೊಡುವ ಕಾರ್ಯ ಮಾಡುತ್ತಿದೆ. ಆದರೆ 20 ಕ್ಕೂ ಹೆಚ್ಚಿನ ಕಾರ್ಮಿಕರು ಕಳೆದ 3 ದಿನಗಳಿಂದ ರಸ್ತೆಯಲ್ಲಿಯೇ ಮಲಗಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಪಂ ಸದಸ್ಯ ಕೆ.ಸೋಮಶೇಖರ್‌ ಪ್ರಶ್ನಿಸಿದ್ದಾರೆ. ವಲಸೆ ಕಾರ್ಮಿಕ ಪಿಂಟು ಕುಮಾರ್‌ ಯಾದವ್‌ ಮಾತನಾಡಿ, ಕಳೆದ 3 ದಿನಗಳಿಂದ ರಸ್ತೆ ಪಕ್ಕದಲ್ಲಿ ಮಲಗುತ್ತಿದ್ದೇವೆ. ದಾನಿಗಳಿಂದ 3 ದಿನಗಳಿಂದ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ನೀಡುತ್ತಿದ್ದಾರೆ. ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲು
ಅವಕಾಶ ಕಲ್ಪಿಸಬೇಕು. ಪೊಲೀಸರಿಗೆ ಎಲ್ಲಾ ರೀತಿಯ ಮಾಹಿತಿ ನೀಡಿದ್ದೇವೆಂದರು. ವಲಸೆ ಕಾರ್ಮಿಕರಾದ ರಾಜ್‌ ಕುಮಾರ್‌ ಚೌದರಿ, ಅಮಿತ್‌ ಯಾದವ್‌, ಸಿಕಿಂದರ್‌ ಯಾದವ್‌, ಮುಕೇಶ್‌ ಯಾದವ್‌ ಮತ್ತಿತರರು ಇದ್ದರು. ತಹಶೀಲ್ದಾರ್‌ ಪ್ರತಿಕ್ರಿಯೆ: ಬಚ್ಚಹಳ್ಳಿ ಗೇಟ್‌ ಮೇಲ್ಸೇತುವೆ ಕೆಲಭಾಗದಲ್ಲಿ ಕಾರ್ಮಿಕರು ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಯಾವ ರಾಜ್ಯದವರು ಎಂದು ತಿಳಿದುಕೊಳ್ಳಲಾಗುವುದು. ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next