Advertisement

Sampaje: ಕೈಪಡ್ಕದಲ್ಲಿ ಸ್ಕೂಟಿ ಸ್ಕಿಡ್‌; ಗಂಭೀರ ಗಾಯ

10:20 PM Jul 27, 2024 | Team Udayavani |

ಅರಂತೋಡು: ಸ್ಕೂಟಿ ಸ್ಕಿಡ್‌ ಆಗಿ ಬಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ಜು. 26ರಂದು ರಾತ್ರಿ ಸಂಭವಿಸಿದೆ.

Advertisement

ಸಂಪಾಜೆ ಗ್ರಾಮದ ಪೆಟ್ರೋಲ್‌ ಪಂಪ್‌ ಬಳಿಯ ನಿವಾಸಿ ರಾಧಾಕೃಷ್ಣ (ಬಾಬೆ)  ಅವರು ರಾತ್ರಿ ಸಂಪಾಜೆಯ ತನ್ನ ಮನೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಕೈಪಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟಿ ಪಲ್ಟಿಯಾಗಿದ್ದು, ರಾಧಾಕೃಷ್ಣ ಅವರ ತಲೆ, ಮುಖ ಹಾಗೂ ಕೈ – ಕಾಲುಗಳಿಗೆ ಗಂಭೀರ ಗಾಯಗೊಂಡರು.

ಈ ವೇಳೆ ಸ್ಥಳೀಯರು ಅವರನ್ನು ಆ್ಯಂಬುಲೆ®Õ…ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿ ಪರೀಕ್ಷಿಸಿದ ವೈದ್ಯರ ಸೂಚನೆಯಂತೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next